Advertisement

ರಸ್ತೆ ದುರಸ್ತಿ ಬಿಲ್ ಪಾವತಿ ಮಾಡದ ಕಂದಾಯ ಅಧಿಕಾರಿಗೆ ಡಿಸಿ ಕಪಾಳಮೋಕ್ಷ

09:58 AM Jan 24, 2020 | keerthan |

ಚಿಕ್ಕಮಗಳೂರು: ನೆರೆ ಪರಿಹಾರ ವಿಚಾರವಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಕಂದಾಯ ಅಧಿಕಾರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಕಳಸದ ಹಿರೇಬೈಲ್ ನಲ್ಲಿ ನಡೆದಿದೆ.

Advertisement

ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದ ಸಂದರ್ಭದಲ್ಲಿ, ಮಳೆ ಹಾನಿಯಿಂದ ಆದ ರಸ್ತೆ ದುರಸ್ತಿ ಕಾರ್ಯದ ಬಿಲ್ ಪಾವತಿಸದ ಬಗ್ಗೆ ಸ್ಥಳೀಯರು ದೂರಿದ್ದರು.

ಕಂದಾಯ ಅಧಿಕಾರಿ ಅಜ್ಜೇಗೌಡರನ್ನು ವಿಷಯದ ಬಗ್ಗೆ ವಿಚಾರಿಸಿದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್,  ಸರ್ಕಾರದಿಂದ ಹಣ ಬಂದಿದೆ. ಯಾಕೆ ಬಿಲ್ ಪಾವತಿ ಮಾಡಿಲ್ಲ ಎಂದು ಪ್ರಶ್ನಿಸಿದರು. ಆರ್ ಐ ( ಕಂದಾಯ ಅಧಿಕಾರಿ) ಸಮರ್ಪಕ ಉತ್ತರ ನೀಡದೆ ಇದ್ದಾಗ ಸಿಟ್ಟಿಗೆದ್ದ ಜಿಲ್ಲಾಧಿಕಾರಿ ಸಾರ್ವಜನಿಕವಾಗಿ ಕಪಾಳ ಮೋಕ್ಷ ಮಾಡಿದ್ದಾರೆ.

ಬಿಲ್ ಪಾವತಿ ವಿಚಾರದಲ್ಲಿ ಆರ್ ಐ. ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿಯಿಂದ ಗೋಲ್ ಮಾಲ್ ಆರೋಪ ಕೇಳಿ ಬರುತ್ತಿದ್ದು, ಕಳೆದ ಒಂದು ವಾರದ ಹಿಂದ ಶಾಸಕ ಎಂ.ಪಿ. ಕುಮಾರ್ ಸ್ವಾಮಿಗೂ ಸ್ಥಳೀಯರು ತರಾಟೆಗೆ ತಗೆದುಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next