Advertisement

ಚಿಕ್ಕಮಗಳೂರು: ಬೈಕ್ ಗಳಿಗೆ ಬೆಂಕಿ ಹಚ್ಚಿದ ಕಿಡಿಗೆಡಿಗಳು; ಶಾಂತಿ ಕದಡುವ ಯತ್ನ

09:53 AM Dec 18, 2019 | keerthan |

ಚಿಕ್ಕಮಗಳೂರು: ನಗರದ ಹಲವೆಡೆ ಬೈಕ್ ಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು ಶಾಂತಿ ಕದಡುವ ಪ್ರಯತ್ನ ನಡೆಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

Advertisement

ನಗರದ ಮಾರ್ಕೆಟ್ ರಸ್ತೆ,  ಪೇನ್ಶನ್ ಮಹಲ್‌, ಶಾದಿ ಮಹಲ್, ಗೌರಿ ಕಾಲುವೆ ಬಳಿ ಘಟನೆ ನಡೆದಿದ್ದು, ಕಿಡಿಗೇಡಿಗಳ ಈ ದುಷ್ಕೃತ್ಯದಿಂದ ಐದು ಬೈಕ್ ಸುಟ್ಟು ಕರಕಲಾಗಿದೆ.

ನಗರದ ಪ್ರಮುಖ‌ ರಸ್ತೆ ಹಾಗೂ ಮನೆ ಎದುರು ನಿಲ್ಲಿಸಿದ್ದ ಬೈಕ್ ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಚಿಕ್ಕಮಗಳೂರು ನಗರದಲ್ಲೆಡೆ ಆತಂಕ ಮನೆ ಮಾಡಿದೆ.

ಸ್ಥಳಗಳಿಗೆ ಎಸ್ಪಿ ಹರೀಶ್ ಪಾಂಡೆ, ಎಎಸ್ ಪಿ ಶೃತಿ ಭೇಟಿ ಪರಿಶೀಲನೆ ನಡೆಸಿದರು. ಕಿಡಿಗೆಡಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಬೆಳ್ಳಂಬೆಳಿಗ್ಗೆ ಪೊಲೀಸ್ ತಂಡಗಳು ನಗರದಲ್ಲಿ ಗಸ್ತು ತಿರುಗಿದವು.

ಚಿಕ್ಕಮಗಳೂರು ನಗರ ಠಾಣೆ ಹಾಗೂ ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ವರದಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next