Advertisement

ಸಿಡಿಲು ಬಡಿದು ಮನೆ ಕುಸಿದು ಒಂದೇ ಕುಟುಂಬ 7 ಮಂದಿ ಗಂಭೀರ ಗಾಯ

09:28 PM Apr 22, 2021 | Team Udayavani |

ಚಿಕ್ಕಬಳ್ಳಾಪುರ:  ಸಿಡಿಲು ಬಡಿದ ಪರಿಣಾಮ ಚಪ್ಪಡಿಕಲ್ಲಿನ ಮನೆ ಕುಸಿದು ಬಿದ್ದು ಮನೆಯಲ್ಲಿದ್ದ ಒಂದೇ ಕುಟುಂಬದ 4 ಜನ ಮಕ್ಕಳು ಸೇರಿ 7 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸೋಮಯಾಜಲಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಸೋಮಯಾಜಲಹಳ್ಳಿ ಗ್ರಾಮದಲ್ಲಿ ಅಶ್ವತ್ಥಪ್ಪ ಎಂಬುವರಿಗೆ ಸೇರಿದ ಮನೆಗೆ ಸಿಡಿಲು ಬಡಿದಿದ್ದು ಮನೆಯಲ್ಲಿದ್ದ ಅಂಬರೀಶ್ ಬಿನ್ ಜಗಣ್ಣ(30), ಗಾಯತ್ರಿ ಕೋಂ ಅಂಬರೀಶ್(25), ಜಗಣ್ಣ (50), ಅಂಬರೀಶ್ ಅವರ ಪುತ್ರಿಯರಾದ ಕುಮಾರಿ ಲಾವಣ್ಯ(5),ವಾಣಿಶ್ರೀ(7),ಪುತ್ರರಾದ ಗೌತಮ್ 3, ದರ್ಶನ್ (11) ತೀವ್ರ ರೀತಿಯ ಗಾಯಗಳಾಗಿದ್ದು ಅವರನ್ನು ಜಿಲ್ಲೆಯ ಚಿಂತಾಮಣಿಯ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.

ಸ್ಥಳಕ್ಕೆ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹಾಗೂ ತಹಶೀಲ್ದಾರ್ ಹನುಮಂತರಾಯಪ್ಪ,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿಕೆ ಮಿಥುನ್ ಕುಮಾರ್  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next