Advertisement

ಟಿಎಂಸಿ, ಆಪ್‌ನಿಂದ ಜಾತ್ಯತೀತ ಮತ ವಿಭಜನೆ : ಚಿದಂಬರಂ

06:07 PM Dec 27, 2021 | Team Udayavani |

ದಿಲ್ಲಿ :  ಬಿಪಿಯನ್ನು ಸೋಲಿಸುವುದಕ್ಕೆ ಕಾಂಗ್ರೆಸ್‌ ಗೆ ಮಾತ್ರ ಶಕ್ತಿ ಇದೆ. ಆದರೆ ತೃಣಮೂಲ ಕಾಂಗ್ರೆಸ್‌, ಆಮ್‌ ಆದ್ಮಿಯಂಥ ಪಕ್ಷಗಳಿಂದ ಬಿಜೆಪಿಯೇತರ ಮತಗಳು ವಿಭಜನೆಯಾಗುತ್ತಿವೆ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ವ್ಯಾಖ್ಯಾನಿಸಿದ್ದಾರೆ.

Advertisement

ಇದನ್ನೂ ಓದಿ:ಮದರ್ ಥೆರೆಸಾ ಚಾರಿಟಿ ಅಕೌಂಟ್ ಮುಟ್ಟುಗೋಲು; ಮಮತಾಗೆ ತಿರುಗುಬಾಣವಾದ ಟ್ವೀಟ್

ಗೋವಾ ಸೇರಿದಂತೆ ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಚಿಂದಂಬರಂ ನೀಡಿದ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಗೋವಾದಲ್ಲಿ ಈ ಬಾರಿ ತೃಣಮೂಲ ಕಾಂಗ್ರೆಸ್‌ ಚುನಾವಣಾ ಅಖಾಡಕ್ಕೆ ಧುಮುಕಿದೆ. ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ ಸವಾಲು ಹಾಕುತ್ತಿದೆ. ಹೀಗಾಗಿ ಬಿಜೆಪಿಯೇತರ ಮತಗಳು ಕಾಂಗ್ರೆಸ್‌ ಸೇರಿ ಈ ಮೂರು ಪಕ್ಷಗಳ ಜತೆಗೆ ವಿಭಜನೆಯಾಗುತ್ತಿದೆ.

ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಈ ಬಾರಿ ಮುನ್ನಡೆ ಸಾಧಿಸುತ್ತದೆ ಎಂದು ಚಿಂದಂಬರಂ ವ್ಯಕ್ತಪಡಿಸಿರುವ ಅಭಿಪ್ರಾಯದ ಮಧ್ಯೆಯೇ ಮತವಿಭಜನೆ ಪ್ರಸ್ತಾಪ ಕುತೂಹಲಕ್ಕೆ ಕಾರಣವಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next