Advertisement

ಹೈಕೋರ್ಟ್‌ ಮೊರೆ ಹೋದ ಚಿದು

01:34 AM Sep 12, 2019 | mahesh |

ನವದೆಹಲಿ: ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಜಾಮೀನಿಗಾಗಿ ಬುಧವಾರ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಅಷ್ಟೇ ಅಲ್ಲ, ಸೆ.19 ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನೂ ಅವರು ಪ್ರಶ್ನಿಸಿದ್ದಾರೆ. ಚಿದಂಬರಂರನ್ನು ದೆಹಲಿಯ ಜೋರ್‌ ಬಾಘ್ ನಿವಾಸದಿಂದ ಆ.21ರಂದು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಅವರ ವಿರುದ್ಧದ ಆರೋಪ ಗಂಭೀರವಾಗಿರುವುದರಿಂದ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿತ್ತು. ಇದಕ್ಕೂ ಮುನ್ನ ಅವರ ನಿರೀಕ್ಷಣಾ ಜಾಮೀನನ್ನು ದೆಹಲಿ ಹೈಕೋರ್ಟ್‌ ತಿರಸ್ಕರಿಸಿತ್ತು.

Advertisement

ಆರ್ಥಿಕತೆ ಬಗ್ಗೆ ಆತಂಕ: ಚಿದಂಬರಂ ಜೈಲಲ್ಲಿದ್ದರೂ ಅವರ ಟ್ವಿಟರ್‌ ಖಾತೆಯಿಂದ ಬುಧವಾರ ಟ್ವೀಟ್ ಮಾಡಲಾಗಿದೆ. ಅವರ ಕುಟುಂಬದವರ ಮೂಲಕ ಟ್ವೀಟ್ ಮಾಡಿಸಿದ್ದು, ದೇಶದ ಆರ್ಥಿಕತೆ ಕುಸಿಯುತ್ತಿದೆ, ಇದು ಆತಂಕ ಮೂಡಿಸಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next