Advertisement

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

01:08 AM Nov 06, 2023 | Team Udayavani |

ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೇವಲ 4 ದಿನಗಳು ಬಾಕಿಯಿರುವಂತೆಯೇ, ಜಾರಿ ನಿರ್ದೇಶನಾಲಯ(ಇ.ಡಿ.) ಸಿಡಿಸಿದ “ಬಾಂಬ್‌’ವೊಂದು ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಮಹಾದೇವ ಬೆಟ್ಟಿಂಗ್‌ ಆ್ಯಪ್‌ನ ಪ್ರವರ್ತಕರಿಂದ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರು 508 ಕೋಟಿ ರೂ.ಗಳ ಕಿಕ್‌ಬ್ಯಾಕ್‌ ಸ್ವೀಕರಿಸಿದ್ದಾರೆ ಎನ್ನುವುದು ಇ.ಡಿ. ಆರೋಪ. ಈ ಆರೋಪವು ಚುನಾವಣೆಯ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಅದರಲ್ಲೂ ಭೂಪೇಶ್‌ ಬಘೇಲ್‌ ನೇತೃತ್ವದಲ್ಲೇ ಚುನಾವಣೆಗೆ ಹೋಗುತ್ತಿರುವ ಆಡಳಿತಾರೂಢ ಕಾಂಗ್ರೆಸ್‌ಗಂತೂ ಇದು ಭಾರೀ ಮುಖಭಂಗ ಉಂಟುಮಾಡಿದೆ.

Advertisement

ಮಹಾದೇವ್‌ ಆ್ಯಪ್‌ ಕೇಸು ಒಂದು ಹೈಪ್ರೊಫೈಲ್‌ ಹಗರಣ. ಈ ಆ್ಯಪ್‌ನ ಮಾಲೀಕ ದುಬಾೖ ಮೂಲದ ಸೌರಭ್‌ ಚಂದ್ರಕಾರ್‌. ಫೆಬ್ರವರಿಯಲ್ಲಿ ದುಬಾೖಯಲ್ಲೇ ಸೌರಭ್‌ ವಿವಾಹ ನಡೆದಿತ್ತು. ಮದುವೆಗೆ ಆತ ಖರ್ಚು ಮಾಡಿದ್ದು ಬರೋಬ್ಬರಿ 250 ಕೋಟಿ ರೂ. ಈ ವೆಚ್ಚವೇ ಆತನ ಮೇಲೆ ಇ.ಡಿ. ಕಣ್ಣು ಬೀಳಲು ಕಾರಣ. ಈಗಾಗಲೇ ಆತನ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಬಾಲಿವುಡ್‌ನ‌ ಅನೇಕ ಖ್ಯಾತನಾಮರನ್ನು ಇ.ಡಿ. ವಿಚಾರಣೆಗೊಳಪಡಿಸಿದ್ದೂ ಆಗಿದೆ. ಮಹಾದೇವ್‌ ಆ್ಯಪ್‌ ಮೂಲಕ ಸೌರಭ್‌ ಮತ್ತು ಆತನ ಸಹಚರ ರವಿ ಉಪ್ಪಳ್‌ ಸುಮಾರು 5 ಸಾವಿರ ಕೋಟಿ ರೂ.ಗಳನ್ನು ಗಳಿಸಿ¨ªಾರೆ ಎನ್ನುವುದು ಇ.ಡಿ. ಅಂದಾಜು. ಈತನ ವಿವಾಹದ ಖರ್ಚು ವೆಚ್ಚದೊಳಗೆ ಕೈಹಾಕಿದಾಗ ಇ.ಡಿ. ಮುಂದೆ, ಬೃಹತ್‌ ಹವಾಲಾ ಜಾಲವೇ ಬಯಲಾಯಿತು. ಅನಂ ತರದಲ್ಲಿ ಮುಂಬಯಿ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಇ.ಡಿ. ದಾಳಿ ನಡೆಸಿ, ಹವಾಲಾ ಕಿಂಗ್‌ಪಿನ್‌ಗಳನ್ನು ಪತ್ತೆಹಚ್ಚಿತು. ಅ.21ರಂದು ಈ ಪ್ರಕರಣ ಸಂಬಂಧ 14 ಮಂದಿಯ ವಿರುದ್ಧ ಮೊದಲ ಆರೋಪಪಟ್ಟಿಯೂ ಸಲ್ಲಿಕೆಯಾಗಿದೆ. ಇವೆಲ್ಲದರ ಮಧ್ಯೆ, ಮಹಾದೇವ ಆ್ಯಪ್‌ ಪ್ರವರ್ತಕರು ಛತ್ತೀಸ್‌ಗಢ‌ ಸಿಎಂ ಬಘೇಲ್‌ಗೆ ಹಂತ ಹಂತವಾಗಿ 508 ಕೋಟಿ ರೂ.ಗಳನ್ನು ಪಾವತಿಸಿದ್ದಾರೆ ಎಂದು ಆರೋಪಿಯೊಬ್ಬ ಹೇಳಿಕೆ ನೀಡಿದ್ದಾನೆಂದು ಯಾವಾಗ ಇ.ಡಿ. ಆರೋಪಿಸಿತೋ, ಆಗ ಈ ಇಡೀ ಪ್ರಕರಣಕ್ಕೆ ಹೊಸ ರಾಜಕೀಯ ಹಾಗೂ ನಾಟಕೀಯ ತಿರುವು ಸಿಕ್ಕಿತು.

ಈ ಪ್ರಕರಣವನ್ನೇ ಈಗ ಬಿಜೆಪಿಯು ಕಾಂಗ್ರೆಸ್‌ ಸರಕಾರ‌ದ ವಿರುದ್ಧ ಬ್ರಹ್ಮಾಸ್ತ್ರವಾಗಿ ಬಳಸುತ್ತಿದೆ. ವಾಸ್ತವದಲ್ಲಿ ಬಘೇಲ್‌ ಸರಕಾರ‌ದ ವಿರುದ್ಧ ಹೇಳಿಕೊಳ್ಳುವಂಥ ಆಡಳಿತ ವಿರೋಧಿ ಅಲೆ ಇಲ್ಲ. ಕಳೆದ 2 ದಿನಗಳ ಹಿಂದೆ ಪ್ರಕಟವಾದ ಸುದ್ದಿವಾಹಿಯೊಂದರ ಸಮೀಕ್ಷಾ ವರದಿಯು ಇದನ್ನು ಹೇಳಿದೆ. ಛತ್ತೀಸ್‌ಗಢದ ಜನರು ಬಘೇಲ್‌ ಸರಕಾರ‌ದ ಜನಪರ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ದೊಡ್ಡಮಟ್ಟದ ಹಗರಣವೊಂದು ಬಯಲಿಗೆ ಬಂದಿರುವುದು ಸರಕಾರ‌ಕ್ಕೆ ಕಳಂಕ ತಂದಿರುವುದರಲ್ಲಿ ಸಂದೇಹವೇ ಇಲ್ಲ. ಸಹಜವಾಗಿಯೇ ಇದು ಜನರ ಮನಸ್ಸಲ್ಲೂ ಅಲ್ಲೋಲಕಲ್ಲೋಲ ಸೃಷ್ಟಿಸಿದೆ.

ಈ ಅಸ್ತ್ರವನ್ನು ವಿಪಕ್ಷ ಬಿಜೆಪಿಯೂ ಸಮಯಕ್ಕೆ ಸರಿಯಾಗಿ ಬಳಸಿಕೊಳ್ಳುತ್ತಿದೆ. ಶನಿವಾರ ಛತ್ತೀಸ್‌ಗಢ‌ದ ದುರ್ಗ್‌ನಲ್ಲಿ ನಡೆದ ಚುನಾವಣ ಪ್ರಚಾರ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ, “ಮಹಾದೇವ’ನ ಹೆಸರು ಹೇಳಿ ಕಾಂಗ್ರೆಸ್‌ನ ಕಾಲೆಳೆದಿದ್ದಾರೆ. “ಕಾಂಗ್ರೆಸ್‌ ಸರಕಾರ‌ವು ನಿಮ್ಮನ್ನು ಲೂಟಿ ಮಾಡಲು ಯಾವೊಂದು ಅವಕಾಶವನ್ನೂ ಬಿಟ್ಟುಕೊಡುವುದಿಲ್ಲ. ಮಹಾದೇವನ ಹೆಸರನ್ನೂ ಅವರು ಬಿಟ್ಟಿಲ್ಲ. ಇವರಿಗೂ ದುಬಾೖ ಯಲ್ಲಿ ಕುಳಿತಿರುವವರಿಗೂ ಏನು ಸಂಬಂಧ’ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಇದಕ್ಕೆ ಸಿಎಂ ಬಘೇಲ್ ಕೂಡ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ. ನನ್ನ ವಿರುದ್ಧ ನೇರ ಹೋರಾಟ ಮಾಡಲು ಸಾಧ್ಯ ವಾಗುತ್ತಿಲ್ಲ. ಇದೇ ಕಾರಣಕ್ಕಾಗಿ ಇ.ಡಿ.ಯನ್ನು ಬಳಸಿಕೊಂಡು ನನ್ನ ಹೆಸರಿಗೆ ಮಸಿ ಬಳಿಯುತ್ತಿದೆ ಎಂದಿದ್ದಾರೆ. ಅಷ್ಟೇ ಅಲ್ಲ, ಪ್ರಧಾನಿ ಮೋದಿ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ದುಬಾೖಯಲ್ಲಿ ಕುಳಿತವರೊಂದಿಗೆ ನಿಮ್ಮ ಡೀಲ್‌ ಏನು ಎಂಬು ದನ್ನು ಮೊದಲು ಬಹಿರಂಗಪಡಿಸಿ, ನಿಮ್ಮ ನಡುವೆ ಡೀಲ್‌ ನಡೆದಿಲ್ಲ ಎಂದಾದರೆ ಮತ್ತೇಕೆ ಲುಕೌಟ್‌ ನೋಟಿಸ್‌ ಜಾರಿ ಮಾಡಿದ ಮೇಲೂ ಇನ್ನೂ ಯಾರೊಬ್ಬರನ್ನೂ ಬಂಧಿಸಿಲ್ಲ, ತಪ್ಪಿ ತಸ್ಥರನ್ನು ಬಂಧಿಸುವುದು ಸರಕಾರ‌ದ ಕರ್ತವ್ಯವಲ್ಲವೇ, ಮಹಾ ದೇವ ಆ್ಯಪ್‌ಗೆ ನಿಷೇಧ ಹೇರಿಲ್ಲವೇಕೆ, ಅದನ್ನು ಮುಚ್ಚದೇ ಇರು ವುದು ಏನನ್ನು ತೋರಿಸುತ್ತಿದೆ ಎಂದು ಮರುಪ್ರಶ್ನೆ ಹಾಕಿದ್ದಾರೆ.

ಇಲ್ಲಿ ಹಗರಣ ನಡೆದಿದೆಯೇ, ಇಲ್ಲವೇ ಎಂಬುದು ಅನಂ ತರದ ಮಾತು. ಆದರೆ ಮಹಾದೇವ ಕಿಕ್‌ಬ್ಯಾಕ್‌ ಪ್ರಕರಣವು ಛತ್ತೀಸ್‌ಗಢ‌ ಚುನಾವಣೆಯ ಫ‌ಲಿತಾಂಶದ ಮೇಲೆ ಹೇಗೆ ಪರಿಣಾಮ ಬೀರಬಹುದು ಎನ್ನುವುದೇ ಈಗಿರುವ ಪ್ರಶ್ನೆ. ಒಂದು ದಿಕ್ಕಿನಲ್ಲಿ ನೋಡಿದರೆ, ಹಿಂದಿನಿಂದಲೂ ಬಿಜೆಪಿಯು ದೇಶಾದ್ಯಂತ ಭ್ರಷ್ಟಾಚಾರದ ಅಸ್ತ್ರದ ಮೂಲಕವೇ ಕಾಂಗ್ರೆಸ್‌ ಅನ್ನು ಬಗ್ಗು ಬಡಿದಿದೆ. ಲೋಕಸಭೆ ಚುನಾವಣೆಯಿಂದ ಹಿಡಿದು ವಿವಿಧ ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಗಳವರೆಗೂ ಬೇರೆ ಬೇರೆ ರೀತಿಯ ಭ್ರಷ್ಟಾಚಾರ, ಹಗರಣಗಳ ಆರೋಪಗಳೇ ಕಾಂಗ್ರೆಸ್‌ಗೆ ಪ್ರತೀ ಬಾರಿ ಮುಳ್ಳಾಗಿ ಪರಿಣಮಿಸಿವೆ. ಅದೇ ರೀತಿ, ಈ ಬಾರಿ ಮಹಾದೇವ ಪ್ರಕರಣದ ಮೂಲಕ ಛತ್ತೀಸ್‌ಗಢದ ಮತದಾರರಲ್ಲಿ ಗೊಂದಲದ ಅಲೆ ಸೃಷ್ಟಿಯಾಗಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಬಘೇಲ್‌ ಸರಕಾರ‌ಕ್ಕೆ ಕಳಂಕ ಅಂಟಿಕೊಂಡಿದೆ. ಕಾಂಗ್ರೆಸ್‌ ಜನರ ವಿಶ್ವಾಸವನ್ನು ಕಳೆದುಕೊಂಡಷ್ಟೂ, ಬಿಜೆಪಿ ಅಧಿಕಾರದ ಚುಕ್ಕಾಣಿಗೆ ಹತ್ತಿರವಾಗಲಿದೆ.

Advertisement

ಮೊದಲ ಬಾರಿಯ ಮತದಾರರು ಹಾಗೂ ಯಾರಿಗೆ ಮತ ಹಾಕಬೇಕು ಎಂಬ ಗೊಂದಲದಲ್ಲಿದ್ದ ಒಂದು ವರ್ಗವು ಸುಲಭವಾಗಿ ಬಘೇಲ್‌ “ಕೈ’ ಬಿಟ್ಟು, ಕಮಲದ ಕಡೆಗೆ ವಾಲಬಹುದು. ಭ್ರಷ್ಟಾಚಾರದಿಂದ ರೋಸಿಹೋಗಿರುವ ಜನರೂ ಈ ಬಾರಿ ಸರಕಾರ‌ ಬದಲಾಯಿಸಿಯೇ ಬಿಡೋಣ ಎಂಬ ನಿರ್ಧಾರಕ್ಕೆ ಬರಲೂಬಹುದು. 2018ರ ವಿಧಾನಸಭೆ ಚುನಾ ವಣೆಯಲ್ಲಿ 5 ಸಾವಿರಕ್ಕಿಂತಲೂ ಕಡಿಮೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಂತಹ 15 ಕ್ಷೇತ್ರಗಳಲ್ಲಿ ಈ ಮತದಾರರ ನಿರ್ಧಾರ ನಿರ್ಣಾಯಕವಾಗಬಹುದು.

ಇನ್ನೊಂದೆಡೆ ಈ ಗಂಭೀರ ಆರೋಪ ಕಾಂಗ್ರೆಸ್‌ಗೆ ಚುನಾವಣೆ ಯಲ್ಲಿ ವರವಾಗಿ ಪರಿಣಮಿಸುವ ಸಾಧ್ಯತೆಯೂ ಇಲ್ಲದಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ‌ವು ಇ.ಡಿ. ಐಟಿ, ಸಿಬಿಐನಂಥ ಕೇಂದ್ರ ತನಿಖಾ ಸಂಸ್ಥೆಗಳನ್ನು ವಿಪಕ್ಷಗಳನ್ನು ಮಣಿಸುವ ಅಸ್ತ್ರಗಳನ್ನಾಗಿ ಬಳಕೆ ಮಾಡುತ್ತಿದೆ ಎಂದು ಎಲ್ಲ ವಿಪಕ್ಷಗಳೂ ಆರೋಪಿಸುತ್ತಲೇ ಇವೆ. ಅದಕ್ಕೆ ಪೂರಕವೆಂಬಂತೆ, ಚುನಾವಣೆಗೆ 4 ದಿನಗಳಿರುವಾಗ ಇ.ಡಿ. ಈ ಕಿಕ್‌ಬ್ಯಾಕ್‌ ಬಾಂಬ್‌ ಸಿಡಿಸಿದೆ. ಜಾರಿ ನಿರ್ದೇಶನಾಲ ಯವು ಏಕಾಏಕಿ ಪತ್ರಿಕಾಗೋಷ್ಠಿ ನಡೆಸಿ ಒಂದು ರಾಜ್ಯದ ಮುಖ್ಯಮಂತ್ರಿ ಗಳಿಗೆ ಇಷ್ಟೊಂದು ಹಣ ಸಂದಾಯವಾಗಿದೆ ಎಂದು ಹೇಳಿ ರು ವುದು ಸಹಜವಾಗಿಯೇ ಕೆಲವರಲ್ಲಾದರೂ ಸಣ್ಣಮಟ್ಟಿಗೆ ಅನು ಮಾನ ಮೂಡಿಸಿದೆ. ಛತ್ತೀಸ್‌ಗಢದ ಮತದಾರರೂ ಸೇರಿದಂತೆ ದೇಶದ ನಾಗರಿಕರು ಇ.ಡಿ. ಆರೋಪದ ಟೈಮಿಂಗ್‌ ಬಗ್ಗೆ ಪ್ರಶ್ನೆ ಮಾಡಲಾರಂಭಿಸಿದ್ದಾರೆ. ಚುನಾವಣೆ ಎದುರಿಸುತ್ತಿರುವ ಮತ್ತು ಕಾಂಗ್ರೆಸ್‌ ಆಡಳಿತವಿರುವ ರಾಜಸ್ಥಾನದಲ್ಲೂ ಕಳೆದೊಂದು ತಿಂಗಳಿಂದ ನಡೆಯುತ್ತಿರುವ ಐಟಿ, ಇ.ಡಿ. ದಾಳಿಗಳು ಕೂಡ ಬಿಜೆಪಿಯ ಉದ್ದೇಶದ ಬಗ್ಗೆ ಪ್ರಶ್ನೆಯೇಳುವಂತೆ ಮಾಡಿದೆ.

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನವೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಇ.ಡಿ., ಐಟಿ ಇಲಾಖೆಗಳು ತನಿಖೆ, ಶೋಧದ ಹೆಸರಲ್ಲಿ ಹೈರಾಣಾಗಿಸಿದ್ದವು. ಆದರೆ ಅದು ಕಾಂಗ್ರೆಸ್‌ ಪರ ಅನುಕಂಪದ ಮತಗಳಾಗಿ ಪರಿವರ್ತನೆಯಾದವು. ಈಗಲೂ ಅಷ್ಟೆ, ಬಘೇಲ್‌ ವಿರುದ್ಧದ ಗಂಭೀರ ಆರೋಪಗಳು ಚುನಾವಣ ಗಿಮಿಕ್‌ ಅಷ್ಟೇ ಎಂಬು ದನ್ನು ಮನದಟ್ಟು ಮಾಡುವಲ್ಲಿ ಕಾಂಗ್ರೆಸ್‌ ಸಫ‌ಲವಾದರೆ, ಇ.ಡಿ. ಅಸ್ತ್ರವೇ ಬಿಜೆಪಿಗೆ ತಿರುಗುಬಾಣವಾಗಬಹುದು. ಅಲ್ಲದೇ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರು ಕೂಡ ನಿರ್ಲಕ್ಷ್ಯ ವಹಿಸದೇ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ಕಾಂಗ್ರೆಸನ್ನು ಗೆಲ್ಲಿಸುವ ಪಣ ತೊಡಬಹುದು.

ಯಾರು ಏನೇ ಗಿಮಿಕ್‌ ಮಾಡಿದರೂ, ಮತದಾರರ ಮನಸ್ಸು ಯಾವ ಕ್ಷಣದಲ್ಲಿ, ಹೇಗೆ ಕೆಲಸ ಮಾಡುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಈಗ ಇ.ಡಿ. ಉರುಳಿಸಿರುವ “ಮಹಾದೇವ’ ಎಂಬ ದಾಳವು ರಾಜಕೀಯ ಚದುರಂಗದಾಟದಲ್ಲಿ ಯಾರನ್ನು ಬಲಿಪಡೆಯಲಿದೆ ಎಂಬುದನ್ನು ನಿರ್ಧರಿಸುವವರು ಮತದಾ ರರೇ ಆಗಿದ್ದಾರೆ. ಡಿ.3ರಂದು ಇದೆಲ್ಲದಕ್ಕೂ ಉತ್ತರ ಸಿಗಲಿದೆ.

 ಹಲೀಮತ್‌ ಸಅದಿಯಾ

Advertisement

Udayavani is now on Telegram. Click here to join our channel and stay updated with the latest news.

Next