Advertisement

Goat: ತಾನು ಬಲಿಕೊಟ್ಟು ತಂದ ಮೇಕೆಯ ಮಾಂಸವನ್ನು ತಿನ್ನುವಾಗಲೇ ಮೃತಪಟ್ಟ ವ್ಯಕ್ತಿ; ಆದದ್ದೇನು?

02:17 PM Jul 04, 2023 | Team Udayavani |

ಛತ್ತೀಸ್‌ಗಢ್:‌ ಬಲಿಕೊಟ್ಟ ಮೇಕೆಯಿಂದಲೇ ವ್ಯಕ್ತಿಯೊಬ್ಬನ ಪ್ರಾಣ ಹೋಗಿರುವ ವಿಚಿತ್ರ ಘಟನೆ ಛತ್ತೀಸ್‌ಗಢದ ಸೂರಜ್‌ಪುರ ಜಿಲ್ಲೆಯಲ್ಲಿ ನಡೆದಿದೆ.

Advertisement

ಬಗರ್ ಸಾಯಿ (50) ಎಂಬ ವ್ಯಕ್ತಿ ತನ್ನ ಇಷ್ಟಾರ್ಥ ಈಡೇರಿದರೆ ಮೇಕೆಯನ್ನು ಬಲಿ ಕೊಡುವುದಾಗಿ ದೇವಸ್ಥಾನದಲ್ಲಿ ಹರಕೆ ಇಟ್ಟಿದ್ದರು. ಅದರಂತೆ ಬಗರ್ ಸಾಯಿ ಅವರ ಇಷ್ಟಾರ್ಥ ಈಡೇರಿದ್ದು, ಭಾನುವಾರ ( ಜು.2 ರಂದು) ಮೇಕೆಯನ್ನು ಹಿಡಿದುಕೊಂಡು ಮದನ್‌ಪುರ ಗ್ರಾಮದ ನಿವಾಸಿಗಳೊಂದಿಗೆ ಖೋಪಾಧಾಮ್‌ಗೆ ತೆರಳಿ ಅಲ್ಲಿ ಮೇಕೆಯನ್ನು ಬಲಿ ಕೊಟ್ಟಿದ್ದಾರೆ.

ಇದನ್ನೂ ಓದಿ: ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣ: ಇಡಿ ವಿಚಾರಣೆಗೆ ಹಾಜರಾದ ಅನಿಲ್ ಅಂಬಾನಿ ಪತ್ನಿ

ಮೇಕೆ ಬಲಿ  ನೆರವೇರಿಸಿದ ನಂತರ ಗ್ರಾಮಸ್ಥರು ಅದರ ಮಾಂಸವನ್ನು ಬೇಯಿಸಿ ಊಟಕ್ಕೆ ಕುಳಿತಿದ್ದಾರೆ. ಈ ವೇಳೆ ಬಗರ್‌ ಸಾಯಿ ಅವರಿಗೆ ಮೇಕೆಯ ಮಾಂಸದಿಂದ ಮೇಕೆಯ ಕಣ್ಣು ಸಿಕ್ಕಿದೆ. ಇದನ್ನು ಬಗರ್‌ ಸಾಯಿ ಅವರು ನುಂಗಲು ಯತ್ನಿಸಿದ್ದಾರೆ. ಆದರೆ ಬೇಯಿಸಿದ ಮೇಕೆಯ ಕಣ್ಣು ಅವರ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಇದರಿಂದ ಉಸಿರುಗಟ್ಟಿದಂತೆ ಆಗಿದೆ. ಕೂಡಲೇ ಅವರನ್ನು  ಊಟದ ಜಾಗದಿಂದಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next