Advertisement

ಛತ್ರಪತಿ ಶಿವಾಜಿ ಜಯಂತ್ಯುತ್ಸವ 

05:07 PM Apr 18, 2018 | Team Udayavani |

ಮಹಾಲಿಂಗಪುರ: ಪಟ್ಟಣದ ಮರಾಠಾ ಸಮಾಜದ ವತಿಯಿಂದ ಛತ್ರಪತಿ ಶಿವಾಜಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಪಟ್ಟಣದ ವಡಗೇರಿ ಪ್ಲಾಟನ ಸಮಾಜದ ಜಾಗೆಯಲ್ಲಿ ಶಿವಾಜಿ ಮೂರ್ತಿಯನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಮಾಲವ್ವ ಗಾಯಕವಾಡ, ಅನಿತಾ ಮ. ಶಿಂಧೆ, ಮಹಾನಂದಾ ಮೋಪಗಾರ, ನಿರ್ಮಲಾ ಮ. ಮೀರಾಪಟ್ಟಿ, ಶ್ರೀದೇವಿ ಸಾವಂತ ಸೇರಿದಂತೆ ಸುಮಂಗಲೆಯರು ತೊಟ್ಟಿಲು ತೂಗಿ ನಾಮಕರಣ ಶಿವಾಜಿ ನಾಮರಕಣ ಮಹೋತ್ಸವ ನೆರವೇರಿಸಿದರು.

Advertisement

ಎತ್ತಿನ ಬಂಡಿಯಲ್ಲಿ ಶಿವಾಜಿ ಭಾವಚಿತ್ರವನ್ನು ಇಟ್ಟುಕೊಂಡು ಸಮಾಜದ ಜಾಗೆಯಿಂದ ಬಸವವೃತ್ತ ಮಾರ್ಗವಾಗಿ ಶಿವಾಜಿ ವೃತ್ತದವರೆಗೆ ತೆರಳಿ, ವೃತ್ತದಲ್ಲಿ ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳಿಸಲಾಯಿತು. 

ಮರಾಠ ಸಮಾಜದ ಅಧ್ಯಕ್ಷ ಸುರೇಶ ಜಾಧವ, ಹಿರಿಯರಾದ ಅಣ್ಣಾಜಿ ಫಡತಾರೆ, ಲಕ್ಕಪ್ಪ ಶಿಂಧೆ, ಕೇದಾರಿ ಶಿಂಧೆ, ಉಮೇಶ
ಜಾಧವ, ಅರ್ಜುನ ಮೋಪಗಾರ, ಮಹೇಶ ಜಾಧವ, ಸುರೇಶ ಶಿಂಧೆ, ಭೀಮಸಿ ಮೋಪಗಾರ, ಮಹಾದೇವ ಸಾವಂತ, ಹನಮಂತ ಮೀರಾಪಟ್ಟಿ, ರಮೇಶ ಪವಾರ, ಗಜಾನನ ಹಾಸೀಲಕರ, ಮಲ್ಲಪ್ಪ ಅಂಬನ್ನಗೋಳ, ಗೋವಿಂದ ಪವಾರ, ಕುಮಾರ ದಬಡೆ, ಗೋಪಾಲ ಪವಾರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next