Advertisement

ಹಲಗೆ ಅಳವಡಿಕೆ ವಿಳಂಬ : ಚೇರ್ಕಾಡಿ, ಬೆಳ್ಳಂಪಳ್ಳಿ ಪರಿಸರದಲ್ಲಿ ನೀರಿನ ಕೊರತೆ

12:17 PM Mar 10, 2022 | Team Udayavani |

ಬ್ರಹ್ಮಾವರ : ಸರ್ಪು ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಕೆ ವಿಳಂಭದಿಂದಾಗಿ ಚೇರ್ಕಾಡಿ, ಬೆಳ್ಳಂಪಳ್ಳಿ, ಪುಣೂcರು, ಕುಕ್ಕೆಹಳ್ಳಿ ಪರಿಸರದಲ್ಲಿ ನೀರಿನ ಸಮಸ್ಯೆ ತಲೆದೋರಿದೆ.

Advertisement

ಸರ್ಪು ಅಣೆಕಟ್ಟಿಗೆ ಮರದ ಹಲಗೆ ಬದಲಾಗಿ ಫೈಬರ್‌ ಹಲಗೆ ಮಂಜೂರಾಗಿತ್ತು. ಹಲಗೆಯು ಕಳೆದ ವರ್ಷವೇ ಬಂದಿದ್ದರೂ ಆ ಕಂಪೆನಿಯ ತಂತ್ರಜ್ಞರೇ ಅಳವಡಿಸಬೇಕಾಗಿರುವುದರಿಂದ ವಿಳಂಭವಾಗಿದೆ. ಈ ಬೇಸಗೆಯಲ್ಲಿ ಅಳವಡಿಸುವ ವೇಳೆ ಮಡಿಸಾಲು ಹೊಳೆಯ ಹರಿದು ಹೋಗಿ ಬರಿದಾಗಿದೆ.

ಇದರಿಂದ ಪರಿಸರದ ನೂರಾರು ಎಕ್ರೆಯ ತೋಟ, ಭತ್ತದ ಕೃಷಿಗೆ ನೀರಿನ ಅಭಾವ ಎದುರಾಗಿದೆ. ಅಂತರ್ಜಲ ಮಟ್ಟ ಕುಸಿದು ಕುಡಿಯುವ ನೀರಿಗೂ ಸಮಸ್ಯೆ ಎದುರಿಸುತ್ತಿದ್ದಾರೆ.
ಪ್ರಸ್ತುತ ಹಿಂಕ್ಲಾಡಿ ಪರಿಸರದ 3 ಅಣೆಕಟ್ಟುಗಳಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಪಂ. ಸದಸ್ಯರು ಭೇಟಿ ನೀಡಿ ಪರಿಶೀಲಿಸಿ ಸ್ಥಳೀಯರೊಂದಿಗೆ ಸಮಾಲೋಚಿಸಿದ್ದಾರೆ. ಹಿಂಕ್ಲಾಡಿ ಅಣೆಕಟ್ಟಿನ ಮೇಲಿನ ಹೊಸ ಅಣೆಕಟ್ಟಿನಿಂದ ಸ್ವಲ್ಪ ಪ್ರಮಾಣದ ನೀರನ್ನು ಬಿಡುವ ಕುರಿತು ಪ್ರಯತ್ನದಲ್ಲಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ : ಹಿಪ್ನಾಟಿಸಂ ಮೂಲಕ ಮಹಿಳೆಯ ಹಣ ದೋಚಿದ ವ್ಯಕ್ತಿಯ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next