Advertisement

ನ್ಯಾಯಾಲಯದಲ್ಲೇ ನಕ್ಸಲ್‌ ಪರ ಘೋಷಣೆ ಕೂಗಿದ ಚೆನ್ನಿ ರಮೇಶ್‌ 

03:43 PM Apr 04, 2017 | Team Udayavani |

ಬೆಳ್ತಂಗಡಿ: ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯದ ಆವರಣದಲ್ಲೇ ಬಂಧಿತ ನಕ್ಸಲ್‌ ಓರ್ವ ನಕ್ಸಲ್‌ ಪರ ಘೋಷಣೆಗಳನ್ನು ಕೂಗಿದ ಘಟನೆ ಮಂಗಳವಾರ ನಡೆದಿದೆ. 

Advertisement

6 ತಿಂಗಳ ಹಿಂದೆ ಜೆ.ಪಿ.ನಗರದಲ್ಲಿ ಬಂಧನಕ್ಕೊಳಗಾಗಿದ್ದ ಚೆನ್ನಿ ರಮೇಶ್‌ (53) ಎಂಬಾತ, ಪೊಲೀಸ್‌ ವಾಹನದಿಂದ ಇಳಿದು ಕೋರ್ಟ್‌ ಆವರಣ ಪ್ರವೇಶಿಸುವ ವರೆಗೆ ನಕ್ಸಲ್‌ ಪರ ಘೋಷಣೆಗಳನ್ನು ಕೂಗಿ, ಮಾವೋ ವಿಚಾರಗಳಿಗೆ ಜೈಕಾರ ಹಾಕಿದ್ದಾನೆ. 

2013 ರಲ್ಲಿ ವೇಣೂರಿನ ನಾರಾವಿಯ ಕತ್ಲೂರಿನ ರಾಮಚಂದ್ರ ಭಟ್‌ ಮನೆಯ ಮೇಲೆ ದಾಳಿ ನಡೆಸಿ ಓಮ್ನಿ ಕಾರು ಮತ್ತು ಬೈಕ್‌ಗೆ ಬೆಂಕಿ ಹಚ್ಚಿದ್ದ. ಕೃತ್ಯ ತಾನೇ ಎಸಗಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದ. 

ಕೋರಮಂಗಲದ ಸ್ಲಂ ನಿವಾಸಿ ಯಾಗಿರುವ ಈತ ಬಿಎ ಪದವೀಧರನಾಗಿದ್ದು, 1987ರಿಂದ 
ನಕ್ಸಲ್‌ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ.  

Advertisement

Udayavani is now on Telegram. Click here to join our channel and stay updated with the latest news.

Next