Advertisement

ಈ ಕಲಾವಿದನಿಗೆ ಒಂದು ಸೆಲ್ಯೂಟ್ ಹೇಳಲೇಬೇಕು…ಯಾಕಂತೀರಾ ?

02:46 PM Jun 27, 2021 | Team Udayavani |

ಚೆನ್ನೈ : ಇಲ್ಲೊಬ್ಬ ಕಲಾವಿದ ಕೋವಿಡ್ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಕೋವಿಡ್ ಲಸಿಕೆ ಕುರಿತು ಜಾಗೃತಿ ಮೂಡಿಸಿದ್ದಾರೆ. ಇದಕ್ಕಾಗಿ ಆಟೋ ರಿಕ್ಷಾವನ್ನು ವಿಭಿನ್ನವಾಗಿ ಸಿದ್ಧಪಡಿಸಿದ್ದಾರೆ.

Advertisement

ಹೌದು, ಹೀಗೆ ತಿಳಿ ನೀಲಿ ಬಣ್ಣದ ಆಟೋ, ಅದರ ಮೇಲೆ ಸೀರಂಜಿ ಹಾಗೂ ಕೋವಿಡ್ ಲಸಿಕೆಯ ಮಾದರಿ ಹೊತ್ತು ಬರುತ್ತಿರುವ ಆಟೋ ಕೋವಿಡ್ ಕುರಿತು ಜಾಗೃತಿ ಮೂಡಿಸುತ್ತಿದೆ. ಲಸಿಕೆ ಪಡೆಯಲು ಹಿಂದೇಟು ಹಾಕುವ ಜನರಿಗೆ ಧೈರ್ಯ ತುಂಬುತ್ತಿದೆ.

ಕೋವಿಡ್ ಮೊದಲ ಹಾಗೂ ಎರಡನೇ ಅಲೆ ದೇಶದ ಜನತೆಯನ್ನು ನಲುಗಿಸಿತು. ಮಹಾಮಾರಿ ವಿರುದ್ಧ ಯಶಸ್ವಿಯಾಗಿ ಹೋರಾಡಲು ಜನರಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕಲಾವಿದ ಗೌತಮ್ ತಮ್ಮ ಕೈ ಚಳಕದಲ್ಲಿ ಆಟೋವೊಂದನ್ನು ವಿಶೇಷವಾಗಿ ಸಿದ್ಧಪಡಿಸಿದ್ದಾರೆ.

ಚೆನ್ನೈನ ಮಹಾ ನಗರ ಪಾಲಿಕೆ ಜೊತೆ ಕೈ ಜೋಡಿಸಿರುವ ಗೌತಮ್, ಆಟೋ ರೀಕ್ಷಾವನ್ನು ಕೋವಿಡ್ ಜಾಗೃತಿ ವಾಹನವಾಗಿ ಸಿದ್ಧಪಡಿಸಿದ್ದಾರೆ.

Advertisement

ಈ ಬಗ್ಗೆ ಮಾಧ್ಯಮಗಳ ಎದುರು ಮಾತಾಡಿರುವ ಗೌತಮ್, ಕೋವಿಡ್ ವಿರುದ್ಧ ಹೋರಾಟಕ್ಕೆ ಲಸಿಕೆ ಹಾಕಿಸಿಕೊಳ್ಳುವುದು ಮೊದಲ ಆದ್ಯತೆಯಾಗಬೇಕು. ಆದ್ದರಿಂದ ಎಲ್ಲರನ್ನೂ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೆಪಿಸಬೇಕು. ಅದಕ್ಕಾಗಿ ಈ ಆಟೋ ಸಿದ್ಧಪಡಿಸಲಾಗಿದೆ.

ಇನ್ನೂ ಕಳೆದ ವರ್ಷ ಕೋವಿಡ್ ಸಮಯದಲ್ಲಿಯೂ ಗೌತಮ್ ಇದೆ ರೀತಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದರು.  ಪೊಲೀಸರ ಜೊತೆ ಕೈ ಜೋಡಿಸಿದ್ದ ಅವರು ವಿಶೇಷವಾದ ಹೆಲ್ಮೆಟ್ ವೊಂದನ್ನು ವಿನ್ಯಾಸಗೊಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next