Advertisement

ಚೆಕ್‌ಡ್ಯಾಂ ಕಾಮಗಾರಿ ಪೂರ್ಣ ವರದಿ ಸಲ್ಲಿಸಿ: ರಘುನಂದನ್‌

02:24 PM Feb 02, 2020 | Suhan S |

ಕೊಪ್ಪಳ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಚೆಕ್‌ ಡ್ಯಾಂಗಳ ಕುರಿತು ಜಿಲ್ಲಾ ಗುಣ ನಿಯಂತ್ರಣ ತಂಡದವರಿಂದ ಕೈಗೊಂಡ ತನಿಖಾ ಕಾರ್ಯವನ್ನು ಪೂರ್ಣಗೊಳಿಸಿ ಇನ್ನು 15 ದಿನಗಳಲ್ಲಿ ಸಂಪೂರ್ಣ ವರದಿ ನೀಡಬೇಕು ಎಂದು ಜಿಪಂ ಸಿಇಒ ರಘುನಂದನ್‌ ಮೂರ್ತಿ ಹೇಳಿದರು.

Advertisement

ನಗರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಯಲ್ಲಿ ಜಿಲ್ಲಾ ಗುಣ ನಿಯಂತ್ರಣ ತಂಡವದರೊಂದಿಗೆ ಸಭೆ ನಡೆಸಿ ಮಾತನಾಡಿದರು. ಜಿಲ್ಲೆಯಲ್ಲಿ 635 ಚೆಕ್‌ ಡ್ಯಾಂಗಳಲ್ಲಿ 338 ಚೆಕ್‌ ಡ್ಯಾಂಗಳಿಗೆ ಸಂಬಂಧಿ ಸಿದಂತೆ ಜಿಲ್ಲಾ ಗುಣ ನಿಯಂತ್ರಣ ತಂಡದವರಿಂದ ತನಿಖೆ ಕಾರ್ಯ ಮುಗಿದಿದೆ. ಇನ್ನೂ 297 ಚೆಕ್‌ ಡ್ಯಾಂಗಳ ತನಿಖೆ ಬಾಕಿ ಇದ್ದು, 15 ದಿನದೊಳಗೆ ಎಲ್ಲ ಚೆಕ್‌ ಡ್ಯಾಂಗಳ ತನಿಖೆ ಪೂರ್ಣಗೊಳಿಸಿ ಸಂಪೂರ್ಣ ವರದಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿ ಎನ್‌.ಕೆ. ತೊರವಿ ಸೇರಿದಂತೆ ಜಿಲ್ಲಾ ಗುಣ ನಿಯಂತ್ರಣ ತಂಡದ ಅ ಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next