Advertisement

ಉಡುಪಿ: ಚೆಕ್‌ ಅಮಾನ್ಯ ಪ್ರಕರಣ… 6 ತಿಂಗಳು ಜೈಲು ಶಿಕ್ಷೆ

11:51 PM Dec 31, 2022 | Team Udayavani |

ಉಡುಪಿ : ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಉಡುಪಿಯ ಪ್ರಧಾನ ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯವು ಕಮಲಾಕರ್‌ ಎನ್‌. ಮೆಂಡನ್‌ ದಾಖಲಿಸಿದ್ದ ಹರೀಶ್ಚಂದ್ರ ಅವರ ವಿರುದ್ಧದ ಪ್ರಕರಣದಲ್ಲಿ ತಪ್ಪಿತಸ್ಥನಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

Advertisement

ವಾದ-ವಿವಾದ ಆಲಿಸಿದ ನ್ಯಾಯಾಲಯ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಎರಡೂ ಪ್ರಕರಣಗಳಲ್ಲಿ ಆರೋಪಿಯನ್ನು ತಪ್ಪಿತಸ್ಥ ಎಂದು ಪರಿಗಣಿಸಿ 6 ತಿಂಗಳ ಸೆರೆವಾಸ ಮತ್ತು 5 ಸಾವಿರ ರೂ. ದಂಡ ವಿಧಿಸಲಾಗಿದೆ. ಚೆಕ್‌ ಮೊತ್ತಗಳನ್ನು ಪರಿಹಾರ ರೂಪದಲ್ಲಿ ಕಮಲಾಕರ್‌ ಅವರಿಗೆ ಹಿಂದಿರುಗಿಸುವಂತೆ ಆದೇಶಿಸಿದೆ. ಕಮಲಾಕರ್‌ ಪರವಾಗಿ ಕುಕ್ಕೆಹಳ್ಳಿ ಶಿವಪ್ರಸಾದ್‌ ಹೆಗ್ಡೆ, ಇಡ್ಯ ಬಾಲಸುಬ್ರಹ್ಮಣ್ಯ ರಾವ್‌, ಅನುಪಮಾ ಕುಮಾರಿ ಹಾಗೂ ಪಾಂಗಾಳ ಜಯಕರ್‌ ಬಂಗೇರ ವಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next