Advertisement

ಭಕ್ತರ ದರ್ಶನಕ್ಕೆ ಚಾರ್‌ಧಾಮ್ ಮುಕ್ತ

01:34 AM May 11, 2024 | Team Udayavani |

ಡೆಹ್ರಾಡೂನ್‌: ಉತ್ತರಾಖಂಡದ ಪ್ರಸಿದ್ಧ ಚಾರ್‌ಧಾಮ ಗಳಾದ ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ದೇಗುಲಗಳು ಭಕ್ತರ ಪ್ರವೇಶಕ್ಕೆ ಶುಕ್ರವಾರ ತೆರೆಯಲಾಗಿದ್ದು, ಕೇದಾರನಾಥವು ಬೆಳಗ್ಗೆ 7 ಗಂಟೆಗೆ 20 ಕ್ವಿಂಟಾಲ್‌ ಹೂವಿನ ಅಲಂಕಾರದೊಂದಿಗೆ ಭಕ್ತರನ್ನು ಸ್ವಾಗತಿಸಿದೆ. ಇದರೊಂದಿಗೆ ಯಮುನೋತ್ರಿ ಸಹ ಮಹಾಪೂಜೆಯ ಬಳಿಕ ಭಕ್ತರ ದರ್ಶನಕ್ಕೆ ಮುಕ್ತವಾಯಿತು. ಇನ್ನು ಗಂಗೋತ್ರಿ ದೇಗುಲವು ಮಧ್ಯಾಹ್ನ 12.20ಕ್ಕೆ ತೆರೆಯಿತು. ಬದ್ರೀನಾಥ ದೇಗುಲ ಮೇ 12ರಿಂದ ದರ್ಶನಕ್ಕೆ ಮುಕ್ತವಾಗಲಿದೆ. ಕೇದಾರ ದೇವಾಲಯದ ಬಾಗಿಲು ತೆರೆಯುವ ವೇಳೆ ನೆರೆದಿದ್ದ ಭಕ್ತರ ಮೇಲೆ ಕಾಪ್ಟರ್‌ ಮೂಲಕ ಪುಷ್ಟವೃಷ್ಟಿ ಮಾಡಲಾಯಿತು. ದೇಗುಲ ತೆರೆದ ದಿನವೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next