Advertisement

ಪೆರ್ಲಂಪಾಡಿ ಚರಣ್ ರಾಜ್ ರೈ ಕೊಲೆ ಪ್ರಕರಣದ ಸುಳಿವು; ಕಿಶೋರ್ ಪೂಜಾರಿ ತಂಡದಿಂದ ಕೃತ್ಯ?

08:20 AM Jun 05, 2022 | Team Udayavani |

ಪುತ್ತೂರು: ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ಚರಣ್ ರಾಜ್ ರೈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಿಶೋರ್ ಪೂಜಾರಿ ಕಲ್ಲಡ್ಕ ತಂಡದ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

ಹಿಂದೂ ಸಂಘಟನೆ ಕಾರ್ತಿಕ್ ಮೇರ್ಲ ಎಂಬವರ ಹತ್ಯೆ ಆರೋಪಿಯಾಗಿದ್ದ ಚರಣ್ ರಾಜ್ ಅವರನ್ನು ಶನಿವಾರ ಸಂಜೆ ಮಾರಕ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಚರಣ್ ರಾಜ್ ಜತೆಗಿದ್ದ ನವೀನ್ ನೀಡಿದ ದೂರಿನಂತೆ ಕಿಶೋರ್ ಪೂಜಾರಿ ತಂಡ ಈ ಕೃತ್ಯ ಎಸಗಿರುವ ಬಗ್ಗೆ ಸುಳಿವು ದೊರೆತಿದೆ.

ಇದನ್ನೂ ಓದಿ:ಇನ್ನೂ ಸಿಕ್ಕಿಲ್ಲ ಸೂರು; 3 ವರ್ಷಗಳ ಹಿಂದಿನ ಸಂತ್ರಸ್ತರಿಗೆ ಸಿಗದ ಗೃಹ ಸೌಭಾಗ್ಯ

ಮೆಡಿಕಲ್ ಶಾಪ್ ನ ಹೊರಗೆ ಕಾರಿನ ಬಳಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಚರಣ್ ರಾಜ್ ಮೇಲೆ ಮೂವರು ತಲವಾರಿನಿಂದ ಹಲ್ಲೆ ನಡೆಸಿದ್ದು ಇದನ್ನು ತಡೆಯಲು ನವೀನ್ ಹೋದಾಗ ಇವರ ಪೈಕಿ ಪರಿಚಿತ ಕಿಶೋರ್ ಪೂಜಾರಿ ಇದ್ದದನ್ನು ಗುರುತಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next