Advertisement

Channapattana; ಯೋಗೇಶ್ವರ್‌ ಹೆಸರು ಅಂತಿಮ ಅಲ್ಲ: ಎಚ್‌ಡಿಕೆ ಸ್ಪಷ್ಟನೆ

09:59 PM Jul 06, 2024 | Team Udayavani |

ಬೆಂಗಳೂರು: ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿಯಾಗಲು ಹಲವಾರು ಹೆಸರುಗಳು ಚರ್ಚೆಯಲ್ಲಿ ಇವೆ. ಅಂತಿಮವಾಗಿ ಕಾರ್ಯಕರ್ತರ ಅಭಿಪ್ರಾಯದಂತೆ ತೀರ್ಮಾನ ಮಾಡುತ್ತೇವೆ. ಕಾದು ನೋಡಿ, ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು. ಈ ಬಗ್ಗೆ ಬಿಜೆಪಿ ದೆಹಲಿ, ರಾಜ್ಯದ ನಾಯಕರ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು. ಸದ್ಯ ಯೋಗೇಶ್ವರ್‌ ಅಭ್ಯರ್ಥಿ ಅಂತ ಹೇಳಬಹುದು. ಆದರೆ ಅದೇ ಅಂತಿಮವಲ್ಲ. ಅನುಸೂಯ ಸೇರಿ ಇನ್ನೂ ಹಲವು ಹೆಸರುಗಳು ಕೇಳಿಬರ್ತಿವೆ, ನೋಡೋಣ ಮುಂದೆ ಎಂದು ಕುಮಾರಸ್ವಾಮಿ ಹೇಳಿದರು.

Advertisement

ಜೆಡಿಎಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, 3 ಕ್ಷೇತ್ರದಲ್ಲಿ ಉಪ ಚುನಾವಣೆಯಿದೆ. ಚನ್ನಪಟ್ಟಣದಲ್ಲಿ ನಾನೇ ಶಾಸಕ ಇದ್ದೆ, ಜೆಡಿಎಸ್‌ ಕ್ಷೇತ್ರ ಅದು. ನನ್ನ ಕಾರ್ಯಕರ್ತರ ಅಭಿಪ್ರಾಯ ತಗೊಬೇಕು, ಆಮೇಲೆ ಮುಂದುವರಿಯಬೇಕು. ನಾನೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳೋಕೆ ಆಗುವುದಿಲ್ಲ. ನಾನು ಚನ್ನಪಟ್ಟಣದಿಂದ ಎರಡು ಬಾರಿ ಗೆದ್ದಿದ್ದೆ. ಯೋಗೇಶ್ವರ್‌ ಅಲ್ಲಿ ಈ ಹಿಂದೆ ಹಲವು ಬಾರಿ ಗೆದ್ದಿದ್ದರು. ನಾನು ಅವರಿಗೆ ನಮ್ಮ ಕಾರ್ಯಕರ್ತರನ್ನು ಭೇಟಿ ಮಾಡಿ ವಿಶ್ವಾಸಕ್ಕೆ ತಗೊಳಿ ಅಂತ ಹೇಳಿದ್ದೇನೆ. ಅಭ್ಯರ್ಥಿಯ ಬಗ್ಗೆ ನಾನು ಬಿಜೆಪಿ ಹೈಕಮಾಂಡ್‌, ರಾಜ್ಯದ ನಾಯಕರ ಜತೆ ಚರ್ಚೆ ಮಾಡಿಲ್ಲ. ನನ್ನ ಚನ್ನಪಟ್ಟಣದ ಕಾರ್ಯಕರ್ತರ ಅಭಿಪ್ರಾಯ ತಗೊಂಡೇ ನಿರ್ಧಾರ ಮಾಡುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next