Advertisement

ಚನ್ನಮ್ಮನ ಕಿತ್ತೂರ: ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಚನ್ನಬಸಪ್ಪ ತುಬಾಕದ ನೇಮಕ

12:03 PM Jul 09, 2024 | Team Udayavani |

ಚನ್ನಮ್ಮನ ಕಿತ್ತೂರ: ತಾತ್ಕಾಲಿಕ ಹೆಚ್ಚುವರಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಚನ್ನಬಸಪ್ಪ ವೈ ತುಬಾಕದ ಅವರನ್ನು ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

Advertisement

ಚನ್ನಬಸಪ್ಪ ತುಬಾಕದ ಅವರು ಬೈಲಹೊಂಗಲ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು.

ಈ ವೇಳೆ ತಾತ್ಕಾಲಿಕ ಹೆಚ್ಚುವರಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ತುಬಾಕದ ಅವರನ್ನು ಅನುದಾನ ರಹಿತ ಶಿಕ್ಷಕರ ಸಂಘದ ಕಾರ್ಯದರ್ಶಿ ಮೃತ್ಯುಂಜಯ ಕಲ್ಮಠ, ಸದಸ್ಯರಾದ ರಮೇಶ ಬಸರಕೋಡ, ಶ್ರೀನಿವಾಸ ಭಜಂತ್ರಿ, ಅದೃಶ್ಯಗೌಡ ಪಾಟೀಲ, ಅರ್ಜನ ಕುರಿ ಸೇರಿದಂತೆ ಇತರರು ಸನ್ಮಾನಿಸಿ ಗೌರವಿಸಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿರುವ ವಿರಾಟ್‌ ಕೊಹ್ಲಿ ಮಾಲೀಕತ್ವದ ಪಬ್‌ ಮೇಲೆ FIR ದಾಖಲು: ಆಗಿದ್ದೇನು?

Advertisement

Udayavani is now on Telegram. Click here to join our channel and stay updated with the latest news.

Next