Advertisement

Nagesh Asundi: ಬಿಜೆಪಿ ಸದಸ್ಯನ ಅಪಹರಣಕ್ಕೆ ಬಳಸಿದ ಕಾರು ಬೆಂಗಳೂರಿನ ರೆಸಾರ್ಟಲ್ಲಿ ಪತ್ತೆ

10:23 AM Sep 02, 2024 | Team Udayavani |

ಚನ್ನಮ್ಮನ ಕಿತ್ತೂರು: ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯತ್ ಬಿಜೆಪಿ ಸದಸ್ಯ ನಾಗೇಶ ಅಸುಂಡಿ ಅಪಹರಣದ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಿನ ಟ್ವಿಸ್ಟ್ ಸಿಗುತ್ತಿದೆ.

Advertisement

ಬೆಂಗಳೂರಿನ ಪ್ರತಿಷ್ಠಿತ ರೆಸಾರ್ಟ್ ಒಂದರಲ್ಲಿ ನಾಗೇಶ ಅಸುಂಡಿ ಅವರ ಅಪಹರಣಕ್ಕೆ ಬಳಸಿದ್ದ ವಾಹನ ಸಂಖ್ಯೆ ಕೆಎ 24-ಎಮ್-5622 ನಂಬರಿನ ಮಹಿಂದ್ರಾ ಸ್ಕಾರ್ಪಿಯೋ ವಾಹನ ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕ್ಲಾರ್ಕ್ ಎಕ್ಸಾಟಿಕಾ ಕನ್ವೆನ್ಷನ್ ರೆಸಾರ್ಟ್‌‌ನಲ್ಲಿ ಪತ್ತೆಯಾಗಿದೆ.

ಘಟನೆಗೆ ಸಂಬಂಧಿಸಿ ಹೋಟೆಲ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ಮಾಡಿದಾಗ ಅಪಹರಣಕ್ಕೆ ಒಳಗಾದ ನಾಗರಾಜ ಅಸುಂಡಿ ಹಾಗೂ ಅಪಹರಿಸಿದ ವ್ಯಕ್ತಿಗಳು ಇರುವ ದೃಶ್ಯಗಳು ಕಂಡು ಬಂದಿದ್ದು ಈ ವೇಳೆ ನಾಗರಾಜ ಅಸುಂಡಿ ಮತ್ತು ಅಪಹರಣಕಾರರು ಸ್ಥಳದಲ್ಲಿ ಇರಲಿಲ್ಲಾ. ಅಪಹರಣಕ್ಕೆ ಬಳಸಲಾದ ವಾಹನವನ್ನು ವಶಕ್ಕೆ ಪಡಿಯಲಾಗಿದೆ ಎಂದು ಸಿಪಿಐ ಶಿವಾನಂದ ಗುಡಗನಟ್ಟಿ ಪತ್ರಿಕೆಗೆ ತಿಳಿದ್ದಾರೆ.

ಇದನ್ನೂ ಓದಿ: Leopard: ಬಸವನಾಡಿನಲ್ಲಿ ಚಿರತೆ ಹಾವಳಿ… ಭೀತಿಯಲ್ಲಿ ಅನ್ನದಾತ, ಡ್ರೋನ್ ಮೂಲಕ ಕಾರ್ಯಾಚರಣೆ

Advertisement

Udayavani is now on Telegram. Click here to join our channel and stay updated with the latest news.

Next