Advertisement

ಚನ್ನಮ್ಮಾಜಿ ದೇಶಪ್ರೇಮ ಮಾದರಿ

10:16 PM Oct 25, 2021 | Team Udayavani |

ಶಿರಹಟ್ಟಿ: ವೀರರಾಣಿ ಕಿತ್ತೂರು ಚನ್ನಮ್ಮಾಜಿ ಬ್ರಿಟಿಷರಿಂದ ದೇಶ ಸಂರಕ್ಷಣೆ ಮಾಡುವುದಕ್ಕಾಗಿ ಹೋರಾಟ ಮಾಡಿದ ಪ್ರಸಂಗ ತಿಳಿದುಕೊಂಡರೆ ಅವರಲ್ಲಿರುವ ಅಪ್ರತಿಮ ದೇಶಪ್ರೇಮ ಮೈ ರೋಮಾಂಚನಗೊಳಿಸುತ್ತದೆ. ಅವರ ದಿಟ್ಟತನ ನಮಗೆಲ್ಲ ಮಾದರಿ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

Advertisement

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಚನ್ನಮ್ಮಾಜಿ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದೇಶ ಕಟ್ಟುವುದು ಮತ್ತು ಅದರ ಸಂರಕ್ಷಣೆ ಮಾಡುವುದು ಸಾಮಾನ್ಯ ವಿಚಾರವಲ್ಲ. ದಿಟ್ಟ ಮಹಿಳೆಯಾಗಿದ್ದರಿಂದ ಕಿತ್ತೂರು ಸಾಮ್ರಾಜ್ಯ ಅಜರಾಮರವಾಗಲು ಸಾಧ್ಯವಾಯಿತು. ಅದರಂತೆ ಅಖಂಡತೆ ಎತ್ತಿ ಹಿಡಿದ ಸಾಮ್ರಾಜ್ಯದ ಆಸುಪಾಸು ಇದ್ದ ಬ್ರಿಟಿಷರನ್ನು ಹೊಡೆದೋಡಿಸಲು ಮಾಡಿದ ಹೋರಾಟ ಸ್ಮರಣೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಜೆ.ಬಿ.ಮಜ್ಜಗಿ, ಪಪಂ ಅಧ್ಯಕ್ಷ ಪರಮೇಶ ಪರಬ, ಉಪಾಧ್ಯಕ್ಷ ಇಸಾಕ ಆದ್ರಳ್ಳಿ, ತಾಪಂ ಇಒ ಡಾ|ನಿಂಗಪ್ಪ ಒಲೇಕಾರ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಸ್‌.ಬಿ.ಹರ್ತಿ, ಬಿಇಒ ಆರ್‌.ಎಸ್‌. ಬುರಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next