Advertisement

ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಸ್ವಗ್ರಾಮದಲ್ಲಿ ನಾಳೆ ಅಂತ್ಯಕ್ರಿಯೆ

05:59 PM Jul 05, 2022 | Team Udayavani |

ಹುಬ್ಬಳ್ಳಿ: ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಅವರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 1:00ಗಂಟೆಗೆ ಇಲ್ಲಿನ ಸುಳ್ಳ ರಸ್ತೆಯಲ್ಲಿ ಇರುವ ಹೊಲದಲ್ಲಿ ನಡೆಸಲು ನಿರ್ಧರಿಸಲಾಗಿದೆ.

Advertisement

ಸುಳ್ಳ ರಸ್ತೆಯಲ್ಲಿನ ಗುರೂಜಿ ಅವರಿಗೆ ಸೇರಿದ ಹೊಲದಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬದವರು ತೀರ್ಮಾನಿಸಲಾಗಿದ್ದು, ಪಾರ್ಥೀವ ಶರೀರವನ್ನು  ಬುಧವಾರ ಬೆಳಿಗ್ಗೆ 10 ಗಂಟೆಗೆ ಅಂತಿಮ ದರ್ಶನಕ್ಕೆ ಇರಿಸಲಾಗುತ್ತದೆ ಎಂದು ಗುರೂಜಿ ಆಪ್ತರೂ ಆಗಿರುವ ವಿಧಾನಪರಿಷತ್ತು ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ತಿಳಿಸಿದರು.

ಅಣ್ಣನ ಮಗ ಮುಂಬಯಿನಲ್ಲಿ ಗುರೂಜಿ ಕಚೇರಿಯಲ್ಲೇ ನೌಕರಿಯಲ್ಲಿದ್ದು, ಅವರ ಅಣ್ಣನ ಪುತ್ರ ಮೃತಪಟ್ಟಿದ್ದರಿಂದ ಪಾರ್ಥಿವ ಶರೀರದೊಂದಿಗೆ ಗುರೂಜಿ ಹುಬ್ಬಳ್ಳಿ ಗೆ ಬಂದಿದ್ದರು. ಒಂದು ತಿಂಗಳ ಹಿಂದೆಯಷ್ಟೆ ಮನೆಗೆ ಆಗಮಿಸಿ ಉಪಹಾರ ಸೇವಿಸಿ ಹೋಗಿದ್ದರು. ಸೋಮವಾರ ಸಂಜೆಯಷ್ಟೇ ಮೊಬೈಲ್ ನಲ್ಲಿ ನನ್ನೊಂದಿಗೆ ಮಾತನಾಡಿದ್ದರು. ಮಂಗಳವಾರ ಭೇಟಿಯಾಗೋಣ ಎಂದಿದ್ದರು ಎಂದು ತಿಳಿಸಿದರು.

ಇದನ್ನೂ ಓದಿ:ಪೊಲೀಸರ ಮಿಂಚಿನ ಕಾರ್ಯಾಚರಣೆ: ಚಂದ್ರಶೇಖರ ಗುರೂಜಿ ಹಂತಕರ ಬಂಧನ 

ಗುರೂಜಿ ಮಗಳು ಹಾಗೂ ಪತ್ನಿ ಮುಂಬಯಿನಲ್ಲಿದ್ದು, ಇಬ್ಬರು ಅಕ್ಕಂದಿರರಲ್ಲಿ ಒಬ್ಬರು ವಿಜಯಪುರ, ಇನ್ನೊಬ್ಬರು ಶಿಕಾರಿಪುರದಲ್ಲಿದ್ದಾರೆ ಎಂದು ತಿಳಿದುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next