Advertisement

ನಾಯ್ಡು ಒಬ್ಬ ಕಳ್ಳ: ಕೆಸಿಆರ್‌

07:25 AM Oct 05, 2018 | Team Udayavani |

ನಿಜಾಮಾಬಾದ್‌: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಒಬ್ಬ ಕಳ್ಳ ಮತ್ತು ವಿಶ್ವಾಸಘಾತಕ. ಅವರನ್ನು ಜನರು ಬೆಂಬಲಿಸಬಾರದು ಎಂದು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ಬುಧವಾರ ಇಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಆರೋಪಿಸಿದ್ದಾರೆ. ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ(ಟಿಡಿಪಿ) ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದನ್ನು ಟೀಕಿಸಿದ ಅವರು, ನಾಯ್ಡು ಅಷ್ಟೊಂದು ಹತಾಶರಾಗಿದ್ದರೆ ನಾನೇ ಅವರಿಗೆ ಕೆಲವು ಸೀಟುಗಳನ್ನು ಬಿಟ್ಟುಕೊಡುತ್ತಿದ್ದೆ ಎಂದಿದ್ದಾರೆ. ಜೊತೆಗೆ ಅವರು ವಿಧಾನ ಪರಿಷತ್‌ ಚುನಾವಣೆಯಲ್ಲಿ ಶಾಸಕರಿಗೆ ಲಂಚ ನೀಡಿದ ಪ್ರಕರಣದಲ್ಲಿ ಸಿಲುಕಿರುವ ಕುರಿತೂ ವ್ಯಂಗ್ಯವಾಡಿದ ಅವರು, ನಾಯ್ಡುವಿನಂಥ ಕಳ್ಳ ನಮ್ಮನ್ನು ಆಳುವುದನ್ನು ಇನ್ನೂ ಸಹಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next