Advertisement

ಚಂದನ ಪ್ರಶಸ್ತಿ ಪ್ರದಾನ ಇಂದು

11:30 AM Nov 12, 2017 | Team Udayavani |

ಬೆಂಗಳೂರು: ಬೆಂಗಳೂರು ದೂರದರ್ಶನ ಕೇಂದ್ರ ನ.12ರಂದು 2017ನೇ ಸಾಲಿನ “ದೂರದರ್ಶನ ಚಂದನ ಪ್ರಶಸ್ತಿ’ ಪ್ರದಾನ ಸಮಾರಂಭ ಆಯೋಜಿಸಿದೆ. ಕುಮಾರ ಸ್ವಾಮಿ ಲೇಔಟ್‌ನ ದಯಾನಂದ ಸಾಗರ ಎಂಜನಿಯರಿಂಗ್‌ ಕಾಲೇಜಿನ ಡಾ.ಪ್ರೇಮ ಚಂದ್ರ ಸಾಗರ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ಮೇಯರ್‌ ಸಂಪತ್‌ ರಾಜ್‌ ಸಮಾರಂಭ ಉದ್ಘಾಟಿಸಲಿದ್ದಾರೆ. ಸಮಾರಂಭದ ನಂತರ ಆಯೋಜಿಸಿರುವ ಮಧುರ ಮಧುರವೀ ಮಂಜುಳ ಗಾನ ಕಾರ್ಯಕ್ರಮಕ್ಕೆ 83ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತಧ್ಯಕ್ಷ ಚಂದ್ರಶೇಖರ ಪಾಟೀಲ್‌ ಚಾಲನೆ ನೀಡುವರು. ಕಾರ್ಯಕ್ರಮದ ಮುದ್ರಿತ ಪ್ರಸಾರ ನ.19ರಂದು ರಾತ್ರಿ 9.30ಕ್ಕೆ ಮತ್ತು ಮಧುರವೀ ಮಂಜುಳಗಾನ ನ.26 ರ ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ ಎಂದು ಕೇಂದ್ರದ ಉಪ ಮಹಾ ನಿರ್ದೇಶಕ ಎಲ್‌. ಚಂದ್ರಶೇಖರ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next