Advertisement

ಹಾವು ಕಡಿದು ಯುವಕ ಸಾವು

04:53 PM Oct 21, 2021 | Team Udayavani |

ಯಳಂದೂರು : ತಾಲೂಕಿನ ಕಂದಹಳ್ಳಿ ಗ್ರಾಮದಲ್ಲಿ ಹಾವು ಕಡಿದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಗುರುವಾರ ಬೆಳಗಿನ ಜಾವ ಸಂಭವಿಸಿದೆ .

Advertisement

ಗ್ರಾಮದ ಸೋಮಣ್ಣನಾಯಕ ಹಾಗೂ ರಾಜಮ್ಮ ಎಂಬುವವ ಮಗ ಸಚಿನ್‌ ( 24 ) ಎಂಬ ಯುವಕನೇ ಮೃತ ದುರ್ದೈವಿ .

ಈತ ಗುಂಡ್ಲುಪೇಟೆಯ ಖಾಸಗಿ ರೆಸಾರ್ಟ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು . ಗ್ರಾಮಕ್ಕೆ ಬುಧವಾರ ಬಂದಿದ್ದ . ಮಲಗಲು ತನ್ನ ಸ್ನೇಹಿತ ಪ್ರಸಾದ್‌ನ ಜೊತೆ ಗ್ರಾಮದ ಆಲೆಮನೆಗೆ ತೆರಳಿದ್ದ ಗುರುವಾರ ಬೆಳಗಿನ ಜಾವ 1.30 ರ ಸಮಯದಲ್ಲಿ ಈತನ ಎಡಗಾಲಿನ ಬೆರಳಿಗೆ ಹಾವು ಕಚ್ಚಿದೆ.

ಇದನ್ನೂ ಓದಿ:ಫ್ಲಿಪ್ ಕಾರ್ಟ್ ನಿಂದ ಕೌಶಲ್ಯಾಭಿವೃದ್ಧಿ ತರಬೇತಿಗೆ ಸಪ್ಲೈ ಚೈನ್ ಆಪರೇಷನ್ಸ್ ಅಕಾಡೆಮಿ ಆರಂಭ

ಕಾಲು ಉರಿ ಎಂದು ನೋವಿನಿಂದ ನರಳುತ್ತಿದ್ದು, ಕೂಡಲೇ ಈತನ ಸ್ನೇಹಿತ ಮನೆಯವರಿಗೆ ವಿಷಯ ತಿಳಿಸಿದ್ದಾನೆ . ತಕ್ಷಣ ಯಳಂದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರ ಜಿಲ್ಲಾಸತೆಗೆ ಕರೆದೊಯ್ಯಲಾಗಿದೆ . ಆದರೆ ಚಿಕಿತ್ಸೆಗೆ ಸ್ಪಂದಿಸದೆ ಯುವಕ ಮೃತಪಟ್ಟಿದ್ದಾನೆ . ಈ ಬಗ್ಗೆ ಯಳಂದೂರು ಪೊಲೀಸ್ ಠಾಣೆಯಲ್ಲಿ ಇವರ ತಂದೆ ಸೋಮಣ್ಣನಾಯಕ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮವನ್ನು ವಹಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next