Advertisement

ಔಷಧ ಉಗ್ರಾಣ ಘಟಕಕ್ಕೆ ಚಾಲನೆ

06:08 PM Jul 22, 2021 | Team Udayavani |

ಚಾಮರಾಜನಗರ: ನಗರದ ಹೊರವಲಯದ ಮಲ್ಲಯ್ಯನಪುರ ಗ್ರಾಮದಬಳಿ ಔಷಧಿ ದಾಸ್ತಾನು ಮಾಡುವ 2.50 ಕೋಟಿ ರೂ.ವೆಚ್ಚದ ಆರೋಗ್ಯಇಲಾಖೆಯ ಉಗ್ರಾಣ ಘಟಕ ನಿರ್ಮಾಣ ಕಾಮಗಾರಿಗೆ ಶಾಸಕಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ಸಲ್ಲಿಸಿದರು.

Advertisement

ಬಳಿಕ ಮಾತನಾಡಿದ ಅವರು,ಘಟಕ ನಿರ್ಮಿಸುವುದರಿಂದ ಸಕಾಲಕ್ಕೆ ರೋಗಿಗಳಿಗೆ ಔಷಧಿ ತಲುಪಿಸಲುಸಹಕಾರಿಯಾಗಲಿದೆ. ಕಟ್ಟಡದಲ್ಲಿ ಕೋಲ್ಡ್‌ ಸ್ಟೋರೇಜ್‌, ಫಾರ್ಮಸಿ,ಕಂಪ್ಯೂಟರ್‌ಕೊಠಡಿ, ಮಾತ್ರೆ ಬಾಕ್ಸ್‌ ಇಡುವ ಕೊಠಡಿ ನಿರ್ಮಿಸಲಾಗುವುದು ಎಂದರು.

ಈ ವೇಳೆ ಗ್ರಾಪಂ ಸದಸ್ಯರಾದ ಮಹದೇವಸ್ವಾಮಿ, ಪ್ರಮೋದ್‌,ರಂಗಸ್ವಾಮಿ, ಮುಖಂಡರಾದ ರಂಗಸ್ವಾಮಿ, ಶಿವಣ್ಣ, ರಾಮು, ಎಇಇಗಳಾದದೊರೆಸ್ವಾಮಿ, ರಾಮಮೋಹನ್‌, ಗುತ್ತಿಗೆದಾರ ಎಚ್‌.ಸಿ.ಸುಬ್ಬಣ್ಣ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next