Advertisement

ಯತ್ನಾಳ್‌ ಕಾರಿಗೆ ವೀರಶೈವ ಮಹಾಸಭಾ ಸದಸ್ಯರ ಮುತ್ತಿಗೆ

06:21 PM Jul 07, 2021 | Team Udayavani |

ಚಾಮರಾಜನಗರ: ನಗರಕ್ಕೆ ಆಗಮಿಸಿದ್ದ ಶಾಸಕ ಬಸವನಗೌಡ ಪಾಟೀಲ್‌ಯತ್ನಾಳ್‌ ವಿರುದ್ಧ ವೀರಶೈವ ಮಹಾಸಭಾ ಜಿಲ್ಲಾ ಶಾಖೆಯ ಕಾರ್ಯಕರ್ತರುಹಾಗೂ ಬಿಎಸ್‌ವೈ ಅಭಿಮಾನಿಗಳು ಘೋಷಣೆ ಕೂಗಿ, ಘೇರಾವ್‌ ಹಾಕುವಯತ್ನ ಮಾಡಿದರು.ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮಂಗಳವಾರ ನಗರಕ್ಕೆ ಆಗಮಿಸಿದ್ದಯತ್ನಾಳ್‌ ಹರಳುಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

Advertisement

ಅಲ್ಲಿ ದೇವರ ದರ್ಶನ ಮಾಡಿ, ದೇವಾಲಯದಿಂದ ಹೊರಬಂದು ಕಾರುಹತ್ತುವಾಗ, 50ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಕಾರಿಗೆ ಅಡ್ಡಲಾಗಿನಿಂತು, ಯತ್ನಾಳ್‌ ಅವರಿಗೆ ಧಿಕ್ಕಾರ ಕೂಗಿದರು. ಯಡಿಯೂರಪ್ಪ ಪರಜೈಕಾರ ಹಾಕಿದರು. ಇದರಿಂದ ಯತ್ನಾಳ್‌ ಕಸಿವಿಸಿಗೊಂಡರು. ನಂತರಪೊಲೀಸರು ಧಿಕ್ಕಾರ ಕೂಗುತ್ತಿದ್ದವರನ್ನು ಚದುರಿಸುವ ಯತ್ನ ನಡೆಸಿದರು.

ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿದ್ದ ಮಹಾಸಭಾ ಜಿಲ್ಲಾಧ್ಯಕ್ಷಮೂಡ್ಲುಪುರ ನಂದೀಶ್‌ ಮಾತನಾಡಿ, ಹಳೆ ಮೈಸೂರು ಭಾಗದಲ್ಲಿವೀರಶೈವ- ಲಿಂಗಾಯತರಲ್ಲಿ ಯಾವುದೇ ತಾರತಮ್ಯವಿಲ್ಲ. ಇಲ್ಲಿರುವ ಗೌಡಲಿಂಗಾಯಿತರನ್ನು 2 ಎಗೆ ಸೇರಿಸುವಂತೆ ಹೋರಾಟ ಮಾಡುವ ಮೂಲಕವೀರಶೈವ ಸಮಾಜವನ್ನು ಒಡೆಯುವಕೆಲಸ ಮಾಡುತ್ತಿದ್ದಾರೆ ಎಂದರು.

ಬಳಿಕ, ವರ್ತಕರ ಭವನದ ಬಳಿ ಮಹಾಸಭಾ ಶಿವರಾಜ್‌ ನಂಜೇದೇವನಪುರ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ನಂತರ ಬಿಡುಗಡೆಮಾಡಿದರು. ಪ್ರತಿಭಟನೆಯಲ್ಲಿ ಮಹಾಸಭಾದ ಕಾಡಹಳ್ಳಿ ಮಧು,ಸೋಮವಾರಪೇಟೆ ಗುರು, ಶಂಕರ, ಕೆ.ಎಲ್‌.ಮಹದೇವಸ್ವಾಮಿ, ಕೂಸಪ್ಪ,ವಿಜಯಬೊಮ್ಮನಹಳ್ಳಿ, ಕೊತ್ತಲವಾಡಿ ಗಜ, ರಾಜ್‌ ಹೊಸೂರು, ಮಲ್ಲಿಕಾರ್ಜುನ, ಮಹೇಂದ್ರಪಾಪು,ಹರಿಪ್ರಸಾದ್‌, ನಂದಿ, ಪುಣಜನೂರುನಂದೀಶ್‌,ಕಾಗಲವಾಡಿ ಪ್ರಮೋದ್‌, ಸಂಜು ಹೊಸೂರು , ಪ್ರದೀಪ…, ಗುರು,ಪ್ರಸಾದ್‌, ವೀರೇಂದ್ರ, ನಂದೀಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next