Advertisement

ಚಾ.ನಗರ-ಮೈಸೂರು ರೈಲ್ವೆ ವಿದ್ಯುದೀಕರಣ ಟೆಂಡರ್‌ ಪೂರ್ಣ

07:36 PM Mar 19, 2021 | Team Udayavani |

ಚಾಮರಾಜನಗರ: ನಗರ ಹಾಗೂ ಮೈಸೂರು ನಡುವಿನ 61 ಕಿ. ಮೀ. ರೈಲ್ವೆ ಮಾರ್ಗವನ್ನು ವಿದ್ಯುದೀಕರಣ ಗೊಳಿಸುವ ಕಾಮಗಾ ರಿಯ ಟೆಂಡರ್‌ ಪ್ರಕ್ರಿಯೆ ಮುಗಿ ದಿದ್ದು, 2022ರ ಜನವರಿಗೆ ಕಾಮ ಗಾರಿ ಮುಗಿಸಲು ಸೂಚನೆ ನೀಡಲಾಗಿದೆ.

Advertisement

ಮಾ. 15ರಂದು ರೈಲ್ವೆ ವಿದ್ಯುದೀಕರಣ ಸಂಸ್ಥೆಯ ಉಪ ಮುಖ್ಯ ಎಲೆಕ್ಟ್ರಿಕಲ್‌ ಎಂಜಿನಿಯರ್‌ ಅವರು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಶಾಖಾಧಿಕಾರಿ ಗಳಿಗೆ ಈ ಸಂಬಂಧ ಪತ್ರ ಬರೆದಿದ್ದಾರೆ. ಮೈಸೂರು ಮತ್ತು ಚಾಮರಾಜನಗರ ನಡವಿನ ಒಟ್ಟು 61 ಕಿ.ಮೀ. ಉದ್ದದ ರೈಲ್ವೆ ಮಾರ್ಗವನ್ನು ವಿದ್ಯು ದೀಕರಣಗೊಳಿಸುವ ಕಾಮಗಾರಿ ಯನ್ನು ಪವರ್‌ಗುರು ಇನ್‌ಫ್ರಾಟೆಕ್‌ ಪ್ರೈವೇಟ್‌ ಲಿಮಿಡೆಡ್‌ಗೆ 2021 ರ ಜನವರಿ 22ರಂದು ಟೆಂಡರ್‌ ಮೂಲಕ ನೀಡಲಾಗಿದೆ. ಈ ಕಾಮಗಾರಿಯನ್ನು 12 ತಿಂಗಳೊಳಗೆ ಅಂದರೆ 2022ರ ಜನವರಿಯೊಳಗೆ ಪೂರ್ಣಗೊಳಿಸಬೇಕೆಂಬ ಷರತ್ತು ವಿಧಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಪವರ್‌ಗುರು ಇನಫ್ರಾಟೆಕ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯು ಓವರ್‌ಹೆಡ್‌ ವಿದ್ಯುತ್‌ ಕಂಬ (ಓವರ್‌ಹೆಡ್‌ ಎಲೆಕ್ಟ್ರಿಕಲ್‌ ಪೋಲ್‌ -ರೈಲ್ವೆ ಪರಿಭಾಷೆಯಲ್ಲಿ ಓಎಚ್‌ಇ ಎಂದು ಕರೆಯಲಾಗುತ್ತದೆ) ಹಾಕುವ ಕಾಮಗಾರಿಯನ್ನು ಮೈಸೂರಿನಿಂದ ಆರಂಭಿಸಲಿದೆ. ಹಾಗಾಗಿ ರೈಲ್ವೆ ಶಾಖಾಧಿಕಾರಿಗಳು ಇದಕ್ಕಾಗಿ ಅಗತ್ಯ ಕ್ರಮಗಳನ್ನು ಕೈ ಗೊಳ್ಳಬೇಕು. ಈ ಕಾಮಗಾರಿಗೆ ಅಗತ್ಯವಾದ ಸಹಕಾರವನ್ನು ನೀಡ ಬೇಕು ಎಂದು ಈ ಪತ್ರದಲ್ಲಿ ಉಪ ಮುಖ್ಯ ಎಲೆಕ್ಟ್ರಿಕ್‌ ಇಂಜಿನಿಯರ್‌ ಅವರು ಮನವಿ ಮಾಡಿದ್ದಾರೆ.

2024ರ ವೇಳೆಗೆ ದೇಶದ ಎಲ್ಲ ರೈಲು ಮಾರ್ಗಗಳನ್ನು ವಿದ್ಯುದೀ ಕರಣಗೊಳಿಸುವ ಗುರಿಯನ್ನು ರೈಲ್ವೆ ಸಚಿ ವಾಲಯ ಹೊಂದಿದೆ. ಚಾಮರಾಜನಗರ- ಮೈಸೂರು ರೈಲ್ವೆ ಮಾರ್ಗದಲ್ಲಿ ಪ್ರಸ್ತುತ ಡೀಸೆಲ್‌ ಎಂಜಿನ್‌ ಚಾಲಿತ ರೈಲುಗಳು ಸಂಚರಿಸುತ್ತಿವೆ. ಕೇಂದ್ರ ಸರ್ಕಾರದ ನೀತಿ ಯನ್ವಯ ಚಾಮರಾಜನಗರ ಮೈಸೂರು ಮಾರ್ಗ ವನ್ನು ವಿದ್ಯುತ್‌ ಮೂಲಕ ಸಂಚರಿಸುವ ರೈಲು ಮಾರ್ಗ ವಾಗಿ ಪರಿವರ್ತಿಸಲಾಗುತ್ತಿದೆ. ಈ ಕಾಮಗಾರಿಯ ಒಟ್ಟು ವೆಚ್ಚದ ಬಗ್ಗೆ ಪತ್ರದಲ್ಲಿ ನಮೂದಿಸಿಲ್ಲ. ಆದರೆ 20 ಕೋಟಿ ರೂ. ವೆಚ್ಚದ ಕಾಮ ಗಾರಿ ಇದಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಈ ಕಾಮಗಾರಿ ಸಂದರ್ಭದಲ್ಲಿ ಹಾಲಿ ಇರುವ ರೈಲು ಗಳು ಸಂಚರಿಸಲು ಯಾವುದೇ ಅಡಚಣೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಿರುವ ಹಳಿಗಳಿಂದ ಆಚೆಗೆ ಓವರ್‌ ಹೆಡ್‌ ವಿದ್ಯುತ್‌ ಕಂಬಗಳನ್ನು (ಓವರ್‌ ಹೆಡ್‌ ಎಲೆಕ್ಟ್ರಿಕ್‌ ಪೋಲ್‌) ಅಳವಡಿಸಲಾಗುತ್ತದೆ. ಹಾಗಾಗಿ ರೈಲುಗಳ ಓಡಾಟದ ನಡುವೆಯೇ ಕಾಮ ಗಾರಿ ನಡೆಸಬಹುದು ಎಂದು ಇಲಾಖೆಯ ಅಧಿಕಾರಿ ಗಳು ತಿಳಿಸಿದರು.

Advertisement

ನನೆಗುದಿಗೆ ಬಿದ್ದ ಹೆಜ್ಜಾಲ- ಚಾ.ನಗರ ಮಾರ್ಗ

ಬೆಂಗಳೂರಿನ ಹೆಜ್ಜಾಲದಿಂದ, ಕನಕಪುರ, ಮಳವಳ್ಳಿ, ಕೊಳ್ಳೇಗಾಲ ಮೂಲಕ ಚಾಮರಾಜನಗರ ತಲುಪುವ 129 ಕಿ.ಮೀ. ಉದ್ದದ, 1330 ಕೋಟಿ ರೂ. ವೆಚ್ಚದ ನೂತನ ರೈಲ್ವೆ ಮಾರ್ಗವನ್ನು ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ, ಅಂದಿನ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದರು. ಅದಕ್ಕಾಗಿ ಪ್ರಥಮ ಹಂತವಾಗಿ 10 ಕೋಟಿ ರೂ. ನೀಡಿದ್ದರು. ಹಿಂದಿನ ಸಂಸದ ಆರ್‌. ಧ್ರುವನಾರಾಯಣ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಶಕ್ತಿ ಮೀರಿ ಶ್ರಮಿಸಿದ್ದರು. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದ ಯೋಜನೆ. ಇದರ ಕಾಮಗಾರಿಗೆ ಕೇಂದ್ರ ಅನುದಾನ ನೀಡಿದರೆ,

ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಡಬೇಕು. ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಭೂಸ್ವಾಧೀನಕ್ಕೆ ಬೇಕಾದ ಅನುದಾನ ರಾಜ್ಯ ಸರ್ಕಾರದಲ್ಲಿಲ್ಲ ಎಂದು ಹೇಳಿದ್ದರು. ಹಾಗಾಗಿ ಆ ಯೋಜನೆ ನನೆಗುದಿಗೆ ಬಿದ್ದಿತ್ತು. ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಸಕ್ತಿವಹಿಸಿದರೆ ಈ ಯೋಜನೆ ಕಾರ್ಯರೂಪಕ್ಕೆ ಬರುತ್ತದೆ. ಇದರಿಂದ ರೈಲು ಮಾರ್ಗವನ್ನೇ ಕಾಣದ ಮಳವಳ್ಳಿ, ಕೊಳ್ಳೇಗಾಲ, ಯಳಂದೂರು, ಸಂತೆಮರಹಳ್ಳಿ ಭಾಗದ ಜನರಿಗೆ ಬಹಳ ಅನುಕೂಲವಾಗುತ್ತದೆ. ಚಾ.ನಗರ ಬೆಂಗಳೂರು ನಡುವೆ ಹತ್ತಿರದ ಮಾರ್ಗವೊಂದು ಲಭ್ಯವಾಗುತ್ತದೆ.

ಉಪಯೋಗವೇನು?

ರೈಲ್ವೆ ಮಾರ್ಗ ವಿದ್ಯುದೀಕರಣದಿಂದ ಮೊದಲನೆಯ ಅನುಕೂಲ ಡೀಸೆಲ್‌ ಇಂಧನದ ಉಳಿತಾಯ ಮತ್ತು ಪರಿಸರ ಮಾಲಿನ್ಯ ಕಡಿತ. ಎರಡನೆಯದಾಗಿ ರೈಲಿನ ವೇಗ ಜಾಸ್ತಿಯಾಗಲಿದೆ. ಚಾಮರಾಜನಗರದಿಂದ ಮೈಸೂರಿಗೆ ಪ್ರತಿನಿತ್ಯ ಸಾವಿರಾರು ಕಟ್ಟಡ ಕಾರ್ಮಿಕರು ಸಂಚರಿಸುತ್ತಾರೆ. ಇವರಿಗಾಗಿಯೇ ಇಜ್ಜತ್‌ ಪಾಸ್‌ ಗಳನ್ನು ವಿತರಿಸಲಾಗಿದೆ. ಅಲ್ಲದೇ ಮೈಸೂರಿನಿಂದ ಚಾಮರಾಜನಗರಕ್ಕೆ, ಚಾಮರಾಜನಗರದಿಂದ ಮೈಸೂರಿಗೆ ಸರ್ಕಾರಿ, ಖಾಸಗಿ ಉದ್ಯೋಗಿಗಳು, ಉದ್ಯೋಗ ನಿಮಿತ್ತ ಓಡಾಡುತ್ತಿದ್ದಾರೆ. ಅವರು ರೈಲನ್ನು ಅವಲಂಬಿಸಿದ್ದಾರೆ. ಮಾರ್ಗದ ವಿದ್ಯುದೀಕರಣದಿಂದ ಮೈಸೂರೇ ಕೊನೆಯ ನಿಲ್ದಾಣವಾಗಿರುವ ಕೆಲವು ರೈಲುಗಳನ್ನು ಚಾಮರಾಜನಗರಕ್ಕೂ ವಿಸ್ತರಿಸಬಹುದು. ಹಾಗಾದಾಗ ನಿತ್ಯ ರೈಲಿನಲ್ಲಿ ಓಡಾಡುವ ಉದ್ಯೋಗಿಗಳಿಗೆ, ಕೂಲಿ ಕಾರ್ಮಿಕರಿಗೆ ಬಹಳ ಅನುಕೂಲವಾಗಲಿದೆ. ರೈಲುಗಳ ಸೀಮಿತ ಸಂಖ್ಯೆಯಿಂದಾಗಿ ಚಾಮರಾಜನಗರ ಮತ್ತು ಮೈಸೂರಿನ ನಡುವೆ ರಸ್ತೆ ಮೂಲಕ ಬಸ್‌ಗಳಲ್ಲಿ ಸಂಚರಿಸುವ ಬಡ ಮತ್ತು ಮಧ್ಯಮ ವರ್ಗದ ಪ್ರಯಾಣಿಕರು ಕಡಿಮೆ ದರದಲ್ಲಿ ರೈಲಿನಲ್ಲಿ ಸಂಚರಿಸುವ ಅನುಕೂಲ ದೊರಕುತ್ತದೆ.

ಕೆ.ಎಸ್‌. ಬನಶಂಕರ ಆರಾಧ್ಯ

 

Advertisement

Udayavani is now on Telegram. Click here to join our channel and stay updated with the latest news.

Next