Advertisement

Chaitra Kundapur ಕಾರು ಮುಧೋಳದಲ್ಲಿ ಪತ್ತೆ; ಸಿಸಿಬಿ ವಶಕ್ಕೆ

11:33 PM Sep 17, 2023 | Team Udayavani |

ಬಾಗಲಕೋಟೆ: ಬಿಜೆಪಿ ಟಿಕೆಟ್‌ ಕೊಡಿಸಲು ಹಣದ ಪಡೆದ ಆರೋಪದಡಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾದ ಚೈತ್ರಾ ಕುಂದಾಪುರ ಕಾರು ಮುಧೋಳದಲ್ಲಿ ಪತ್ತೆಯಾಗಿದ್ದು, ಅದನ್ನು ಜಪ್ತಿ ಮಾಡಲಾಗಿದೆ. ಮುಧೋಳದ ಹಿಂದೂ ಸಂಘಟನೆ ಮುಖಂಡ ಕಿರಣ ಗ್ಯಾನಪ್ಪಗೋಳ ಎಂಬವರ ವಶದಲ್ಲಿದ್ದ ಕೆಎ-20, ಎಂಇ-7253 ಸಂಖ್ಯೆಯ ಕಾರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜತೆಗೆ ಕಿರಣ ಅವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮೂಲಗಳ ಪ್ರಕಾರ, ಈ ಕಾರು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿತ್ತು. ಚೈತ್ರಾ ಅವರ ಆಪ್ತರೊಬ್ಬರು ತಿಳಿಸಿದ ಹಿನ್ನೆಲೆಯಲ್ಲಿ ಕಿರಣ ಅಲ್ಲಿಂದ ಈ ಕಾರನ್ನು ಮುಧೋಳಕ್ಕೆ ತಂದಿದ್ದರು ಎನ್ನಲಾಗಿದೆ. ಸಿಸಿಬಿ ಪೊಲೀಸರು ಎಲ್ಲವನ್ನೂ ಸಮಗ್ರವಾಗಿ ತನಿಖೆ ನಡೆಸುತ್ತಿದ್ದಾರೆ.

Advertisement

ಗೋವಿಂದಬಾಬುಗೆ ನೋಟಿಸ್‌
ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ದೂರುದಾರ ಗೋವಿಂದಬಾಬು ಪೂಜಾರಿಗೆ ಮತ್ತೇ ನೋಟಿಸ್‌ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. 5 ಕೋಟಿ ರೂ. ಮೂಲದ ಬಗ್ಗೆ ಮಾಹಿತಿ ಕೇಳಿ ನೋಟಿಸ್‌ ನೀಡಲಾಗಿದೆ. ಯಾವ ರೂಪದಲ್ಲಿ ಆರೋಪಿಗಳಿಗೆ ಹಣ ನೀಡಲಾಗಿದೆ ಮುಂತಾದ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಮತ್ತೆ 2 ಕೋ. ರೂ.ನಗದು, ಚಿನ್ನಾಭರಣ ಪತ್ತೆ
ಶನಿವಾರವಷ್ಟೇ ಚೈತ್ರಾ ಕುಂದಾಪುರ ಮನೆ, ಬ್ಯಾಂಕ್‌ ಖಾತೆಗಳು ಮತ್ತು ಆಕೆಯ ಸಂಬಂಧಿಕರ ಬ್ಯಾಂಕ್‌ ಖಾತೆಗಳಲ್ಲಿದ್ದ 1.08 ಕೋಟಿ ರೂ. ಮೌಲ್ಯದ ಆಸ್ತಿ, 65 ಲಕ್ಷ ರೂ. ಚಿನ್ನಾಭರಣ, 40 ಲಕ್ಷ ರೂ. ಜಪ್ತಿ ಮಾಡಲಾಗಿತ್ತು. ಈಗ ಕುಂದಾಪುರ, ಬಾಗಲಕೋಟೆ ಮತ್ತಿತರ ಕಡೆ ತಪಾಸಣೆ ನಡೆಸಿ ಹೆಚ್ಚುವರಿಯಾಗಿ ಚಿನ್ನಾಭರಣ, ನಗದು, ಬ್ಯಾಂಕ್‌ ಠೇವಣಿ ಸೇರಿ 1 ಕೋ. ರೂ. ಮೊತ್ತವನ್ನು ಪತ್ತೆ ಹಚ್ಚಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next