Advertisement

Chain Theft: ಕಷ್ಟ ನಿವಾರಿಸುವೆ ಎಂದು ಮಾಂಗಲ್ಯ ಸರ ಕದ್ದ ಕಳ್ಳ ಸ್ವಾಮೀಜಿ!

12:01 PM Aug 26, 2023 | Team Udayavani |

ಬೆಂಗಳೂರು:  ಕೌಟುಂಬಿಕ ಕಲಹ ಸರಿಪಡಿ ಸಲು ಪೂಜೆ ಮಾಡಬೇಕೆಂಬ ನೆಪವೊಡ್ಡಿ ಬಂದ ಕಳ್ಳ ಸ್ವಾಮೀಜಿಯೊಬ್ಬ 2.40 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ದೋಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ಇಂದಿರಾನಗರದ ನಿವಾಸಿ ಸುಗುಣಾ ಎಂಬುವವರು ಕೊಟ್ಟ ದೂರಿನ ಅನ್ವಯ ಇಂದಿರಾನಗರ ಪೊಲೀಸ್‌ ಠಾಣೆಯಲ್ಲಿ ತಮಿಳುನಾಡಿನ ರಾಜಾ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಸುಗುಣ ತಮಿಳುನಾಡು ಮೂಲದ ರಾಜ ಎಂಬ ಸ್ವಾಮೀಜಿಗೆ ಕರೆ ಮಾಡಿ ಸಂಪರ್ಕಿಸಿ ತನ್ನ ಕಷ್ಟ ಹೇಳಿಕೊಂಡಿದ್ದಳು. ಇದಕ್ಕೆ ಮನೆಗೆ ಬಂದು ಪೂಜೆ ಸಲ್ಲಿಸಿ ಸಮಸ್ಯೆ ನಿವಾರಿಸುತ್ತೇನೆ ಎಂದು ಸ್ವಾಮೀಜಿ ಹೇಳಿದ್ದ  ಆ.13ರಂದು ಸುಗುಣಾ ಮನೆಗೆ ಸ್ವಾಮೀಜಿ ಬಂದಿದ್ದ. ಸಂಜೆ 4ರಿಂದ 4.45ರವರೆಗೂ ಮನೆಯೊಳಗೆ ಪೂಜೆ ಮಾಡಿದ್ದ. ಪೂಜೆ ಸಲ್ಲಿಸಿದ್ದ ಸ್ಥಳದಲ್ಲಿ ಮಾಂಗಲ್ಯ ಸರವನ್ನು ಬಿಚ್ಚಿಡುವಂತೆ ಸುಗುಣಾಗೆ ಸೂಚಿಸಿದ್ದ. ಅದರಂತೆ ಸುಗುಣಾ ತಮ್ಮ ಸರವನ್ನು ಬಿಚ್ಚಿಟ್ಟಿದ್ದರು. ಬಳಿಕ ಮನೆಯ ಹೊರಗಡೆ ಸುಗುಣ ಪೂಜೆ ಸಲ್ಲಿಸಲು ಹೋದಾಗ ಆರೋಪಿ ಮಾಂಗಲ್ಯ ಸರದ ಸಮೇತ ಪರಾರಿಯಾಗಿದ್ದಾನೆ. ಇಂದಿರಾನಗರ ಠಾಣೆ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next