Advertisement

ಫೋನ್‌ನಲ್ಲೇ ಯೋಜನೆಗಳ ಮಾಹಿತಿ ಕಲೆಹಾಕಿದ ಸಿಇಒ

06:30 AM May 21, 2020 | Team Udayavani |

ರಾಮನಗರ: ಕೋವಿಡ್‌-19 ವೈರಸ್‌ ಸೋಂಕಿನಿಂದಾಗಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಡಿಜಿಟಲ್‌ ಮಧ್ಯಮದ ಮೂಲಕ ತಮ್ಮ ಅಧೀನ ಅಧಿಕಾರಿ ಗಳಿಂದ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.

Advertisement

ರಾಮನಗರ ಜಿಲ್ಲಾ ಪಂಚಾಯತ್‌  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ರಾಮನಗರ ಜಿಲ್ಲೆಯ ಎಲ್ಲಾ ತಾಲೂಕುಗಳ ಕಾರ್ಯ ನಿರ್ವಹಣಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳೊಂದಿಗೆ ನರೇಗಾ, ಸ್ವತ್ಛ ಭಾರತ  ಗ್ರಾಮೀಣ, ವಸತಿ ಯೋಜನೆ, ತೆರಿಗೆ ಮತ್ತು ಇತರೆ ಯೋಜನೆಗಳ ಕುರಿತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಸಮ್ಮುಖದಲ್ಲಿ ಗ್ರೂಪ್‌ ಪೋನ್‌ ಟೇಕ್‌ ಮೂಲಕ ಪರಿಶೀಲನೆ ನಡೆಸಿದರು.

ಕೋವಿಡ್‌-19 ಕುರಿತು ಅರಿವು ಮತ್ತು ಕೋವಿಡ್‌-19  ಹಸಿರು ವಲಯವನ್ನು ಮುಂದುವರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ತಮ್ಮ ಕಚೇರಿಯಲ್ಲೇ ಕುಳಿತು ಅಧೀನ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಸಂಗ್ರಹಿಸಿದರು. ಜಿಪಂ ಉಪಕಾರ್ಯದರ್ಶಿ ಉಮೇಶ್‌ ಮತ್ತು  ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳು ಅವರೊಂದಿಗೆ ಇದ್ದು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next