Advertisement

Hyderabad: ಖಾಸಗಿ ಸಂಸ್ಥೆಯ ಬೆಳ್ಳಿಹಬ್ಬದ ಸಂಭ್ರಮಾಚರಣೆ ವೇಳೆ ಅವಘಡ; ಸಿಇಒ ಮೃತ್ಯು

03:14 PM Jan 20, 2024 | Team Udayavani |

ಹೈದರಾಬಾದ್:  ಖಾಸಗಿ ಸಂಸ್ಥೆಯೊಂದರ ಬೆಳ್ಳಿಹಬ್ಬದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಅಪಘಾತದಲ್ಲಿ ಖಾಸಗಿ ಸಂಸ್ಥೆಯೊಂದರ ಸಿಇಒ ಸಾವನ್ನಪ್ಪಿದ್ದು, ಮತ್ತೊಬ್ಬ ಅಧಿಕಾರಿ ಗಂಭೀರ ಗಾಯಗೊಂಡಿರುವ ಘಟನೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ  ನಡೆದಿದೆ ಎಂದು ಪೊಲೀಸರು ಶುಕ್ರವಾರ(ಜ.19 ರಂದು) ಹೇಳಿದ್ದಾರೆ.

Advertisement

ಗುರುವಾರ ಸಂಜೆ(ಜ.18 ರಂದು) ಖಾಸಗಿ ಸಂಸ್ಥೆಯೊಂದರ ಬೆಳ್ಳಿಹಬ್ಬದ ಸಂಭ್ರಮಾಚರಣೆ ಇತ್ತು. ಈ ಸಮಾರಂಭವನ್ನು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಆಯೋಜಿಸಲಾಗಿತ್ತು. ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಕಂಪನಿಯ ಸಿಇಒ ಸಂಜಯ್ ಶಾ ಮತ್ತು ಅವರ ಸಹೋದ್ಯೋಗಿ ಕಬ್ಬಿಣದ ಪಂಜರದೊಳಗೆ (ಐರನ್‌ ಕೇಜ್) ಪ್ರವೇಶ ಮಾಡಿದ್ದಾರೆ. ಪಂಜರದಿಂದ ಕೆಳಗಿಳಿಸುವ ಭರದಲ್ಲಿ ಪಂಜರಕ್ಕೆ ಬೆಂಬಲವಾಗಿ ನಿಂತಿದ್ದ ಸರಪಳಿಯೊಂದು  ಒಂದು ಬದಿಯಿಂದ ಮುರಿದು ಬಿದ್ದಿದೆ. ಪರಿಣಾಮ ಇಬ್ಬರು ಕೂಡ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.‌

ಇದನ್ನೂ ಓದಿ: Sania Mirza ಜತೆಗಿನ ಸಂಬಂಧಕ್ಕೆ ಅಂತ್ಯವಾಡಿ ಎರಡನೇ ಮದುವೆಯಾದ ಶೋಯೆಬ್‌ ಮಲಿಕ್

ಕೂಡಲೇ ಸಿಇಒ ಸಂಜಯ್‌ ಶಾ ಹಾಗೂ ಸಹದ್ಯೋಗಿ ಅವರನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಸಂಜಯ್‌ ಶಾ ಕೊನೆಯುಸಿರೆಳೆದಿದ್ದಾರೆ. ಸಹದ್ಯೋಗಿ ಗಂಭೀರವಾಗಿದ್ದಾರೆ. ಕಂಪನಿಯ ಇನ್ನೊಬ್ಬ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಫಿಲ್ಮ್ ಸಿಟಿ ಈವೆಂಟ್ ಮ್ಯಾನೇಜ್‌ಮೆಂಟ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next