Advertisement

ಬವಣೆ ನೀಗಲು ಇಂದ್ರಾವತಿ

06:00 AM Mar 23, 2018 | Team Udayavani |

ಹೊಸದಿಲ್ಲಿ: ಕರ್ನಾಟಕ ಮತ್ತು ತಮಿಳುನಾಡಿನ ನೀರಿನ ಸಮಸ್ಯೆ ನಿವಾರಣೆಗೆ ಮಹಾರಾಷ್ಟ್ರದ ಇಂದ್ರಾವತಿ ನದಿಯ ಹೆಚ್ಚುವರಿ ನೀರು ತರಲು ಯೋಜನೆ ರೂಪಿಸಲಾಗುತ್ತಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ವಿಶ್ವ ನೀರು ದಿನದ ಅಂಗವಾಗಿ ಫಿಕ್ಕಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀರಿನ ಲಭ್ಯತೆಗೆ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ನಡೆಸಲಾಗುವುದು ಎಂದೂ ತಿಳಿಸಿದ್ದಾರೆ. 

Advertisement

ಯಾರಿಗೆ ಅನುಕೂಲ? ಈ ನದಿಗಳನ್ನು ಜೋಡಣೆ ಮಾಡುವುದರಿಂದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನ ಕುಡಿಯುವ ನೀರು ಪೂರೈಕೆಗೆ ಅನುಕೂಲ.

ಜೋಡಣೆ ಹೇಗೆ? ಸದ್ಯದ ಯೋಜನೆ ಪ್ರಕಾರ ನೀರನ್ನು ಪೈಪ್‌ ಗಳ ಮೂಲಕ ಸಾಗಿಸಲಾಗುವುದು. ಈ ಮೂಲಕ ಕಾವೇರಿಗೆ 100 ಟಿಎಂಸಿ ನೀರು ತಲುಪಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಈ ವರ್ಷವೇ ಆರಂಭ : 30 ನದಿ ಜೋಡಣಾ ಯೋಜನೆಗಳಲ್ಲಿ ಐದು ಈ ವರ್ಷವೇ ಆರಂಭ. 

ನೀರು ಪೂರೈಕೆ ಹೇಗೆ? 
ಹಂತ 1: ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯಲ್ಲಿರುವ ಇಂದ್ರಾವತಿ ನದಿಯ ಹೆಚ್ಚುವರಿ ನೀರು ಗೋದಾವರಿಗೆ.

Advertisement

ಹಂತ 2: ಗೋದಾವರಿಯಿಂದ ಸೀದಾ ಕಾಳೇಶ್ವರಿ ಜಲಾಶಯಕ್ಕೆ.

ಹಂತ 3 : ಕಾಳೇಶ್ವರಿ ಜಲಾಶಯದಿಂದ ಮತ್ತೆರಡು ಜಲಾಶಯಕ್ಕೆ ನೀರು ಹರಿಸಿ ಅಲ್ಲಿಂದ ಕಾವೇರಿಗೆ.

ಹಂತ 4 (ಇನ್ನೊಂದು ಮೂಲ) ಪೋಲಾವರಂ ಜಲಾಶಯದ ನೀರನ್ನು ಕೃಷ್ಣಾ ನದಿಗೆ

ಹಂತ 5: ಕೃಷ್ಣಾ ನದಿಯಿಂದ ಕರ್ನಾಟಕ – ಆಂಧ್ರದ ಪೆನ್ನಾರ್‌ಗೆ.

ಹಂತ 6 : ಪೆನ್ನಾರ್‌ ನದಿಯಿಂದ ಕಾವೇರಿಗೆ ಹರಿಸುವುದು

Advertisement

Udayavani is now on Telegram. Click here to join our channel and stay updated with the latest news.

Next