Advertisement

ಆಂಧ್ರ ಪ್ರದೇಶಕ್ಕೆ 700 ಕೋಟಿ ರೂ. ಕೇಂದ್ರ ನೆರವು ಇನ್ನೂ ಬಂದಿಲ್ಲ

04:08 PM Oct 10, 2018 | Team Udayavani |

ಹೊಸದಿಲ್ಲಿ : ಕೇಂದ್ರದಲ್ಲಿನ ಎನ್‌ಡಿಎ ಸರಕಾರದಿಂದ ತೆಲುಗು ದೇಶಂ ಪಕ್ಷ ಹೊರಬಿದ್ದಿರುವ ಕಾರಣ ಆಂಧ್ರ ಪ್ರದೇಶದ ಏಳು ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ 2017-18ರ ಸಾಲಿನಲ್ಲಿ ನೀಡಬೇಕಿದ್ದ 700 ಕೋಟಿ ರೂ. ನೆರವನ್ನು ಕೇಂದ್ರ ಸರಕಾರ ಇನ್ನೂ ನೀಡಿಲ್ಲ ಎಂದು ಆಂಧ್ರ ಪ್ರದೇಶದ ಯೋಜನಾ ಮಂಡಳಿಯ ಉಪಾಧ್ಯಕ್ಷ ಸಿ ಕುಟುಂಬ ರಾವ್‌ ಹೇಳಿದ್ದಾರೆ.

Advertisement

ಆದರೆ ತೆಲಂಗಾಣಕ್ಕೆ ನೀಡಬೇಕಿದ್ದ ಇದೇ ರೀತಿಯ ನೆರವನ್ನು (700 ಕೋಟಿ ರೂ.) ಕೇಂದ್ರ ಸರಕಾರ ಈಗಾಗಲೇ ನೀಡಿದ್ದು ಕೇಂದ್ರದ ತಾರತಮ್ಯ ನೀತಿಗೆ ಇದು ಪ್ರಬಲ ಸಾಕ್ಷಿಯಾಗಿದೆ ಎಂದು ರಾವ್‌ ಆರೋಪಿಸಿದ್ದಾರೆ.

ವಿಭಜಿತ ಆಂಧ್ರ ಪ್ರದೇಶಕ್ಕೆ 700 ಕೋಟಿ ನೆರವನ್ನು ನೀತಿ ಆಯೋಗ ಶಿಫಾರಸು ಮಾಡಿತ್ತು. ಆದರೆ ಈ ಕಡತ ಪ್ರಧಾನಿಯವರ ಕಾರ್ಯಾಲಯದಲ್ಲಿ ಕಳೆದ ಕೆಲವು ತಿಂಗಳಿಂದ ಬಾಕಿ ಉಳಿದಿದೆ ಎಂದು ರಾವ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next