ವಿವಿಧ ಜಿಲ್ಲೆಗಳಲ್ಲಿ ಅಧ್ಯಯನ ಪ್ರವಾಸ ನಡೆಸಿದರು.
Advertisement
ಪ್ರವಾಸದ ಎರಡನೇ ದಿನವಾದ ಭಾನುವಾರ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಅಮಿತಾಬ್ ಗೌತಮ್ ನೇತೃತ್ವದ ತಂಡ ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳಿಗೆ ಭೇಟಿ ನೀಡಿ, ರೈತರ ಸಮಸ್ಯೆ ಆಲಿಸಿತು. ಈ ಮಧ್ಯೆ,ನಿಗದಿಯಾದಂತೆ ಹಗರಿಬೊಮ್ಮನಹಳ್ಳಿ ತಾಲೂಕಿನ ಅಲಬೂರು ಗ್ರಾಮಕ್ಕೆ ತಂಡ ಬಾರದಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಬರ ಅಧ್ಯಯನ ತಂಡಕ್ಕೆ ಬಾಡೂಟದಾವಣಗೆರೆ: ಬರ ಅಧ್ಯಯನಕ್ಕೆ ಆಗಮಿಸಿದ್ದ ಕೇಂದ್ರ ತಂಡ ದಾವಣಗೆರೆ ಜಿಲ್ಲಾ ಪ್ರವಾಸದಲ್ಲಿ ಬಾಡೂಟ ಸೇವಿಸಿದೆ. ಭಾನುವಾರ, ಬಳ್ಳಾರಿ ಜಿಲ್ಲಾ ಪ್ರವಾಸ ಮುಗಿಸಿಕೊಂಡು ಮಧ್ಯಾಹ್ನ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ, ಜಗಳೂರು ಹಾಗೂ ದಾವಣಗೆರೆ ತಾಲೂಕಿನ ಕೆಲವು ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ವೀಕ್ಷಿಸಲು ಆಗಮಿಸಿದ್ದ ತಂಡಕ್ಕೆ ಹರಪನಹಳ್ಳಿ ತಾಲೂಕು ಚಿಗಟೇರಿ ಬಳಿಯ ನಜೀರ್ ನಗರದಲ್ಲಿನ ಮೊರಾರ್ಜಿ ವಸತಿ ಶಾಲೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಬರ ಅಧ್ಯಯನ ತಂಡಕ್ಕೆ ಹೊರಗಡೆಯಿಂದ ಬಾಡೂಟ ತರಿಸಲಾಗಿತ್ತು. ಚಿಕನ್ ಮಸಾಲಾ, ಎಗ್ ಮಸಾಲಾ, ಮಟನ್ ಚಾಪ್ಸ್, ಖಡಕ್ ರೊಟ್ಟಿ, ರಾಗಿ ಮುದ್ದೆ, ಹೆಸರು ಬೇಳೆ ಪಾಯಸ, ಅನ್ನ, ಸಾಂಬಾರ್ ಹೊರಗಡೆಯಿಂದ ತರಿಸಲಾಗಿತ್ತು. ಅಧಿಕಾರಿಗಳು ಬಾಡೂಟ ಸವಿದು, ನಂತರ ಜಗಳೂರು ಹಾಗೂ ದಾವಣಗೆರೆ ತಾಲೂಕಿನ ಗ್ರಾಮದ ಜಮೀನಿನಲ್ಲಿ ಬೆಳೆ ಹಾನಿ ವೀಕ್ಷಿಸಿ, ರೈತರಿಂದ ಮಾಹಿತಿ ಪಡೆದರು.