Advertisement

ಕೇಂದ್ರ ಸರಕಾರದ ಸಾಧನೆ ಶೂನ್ಯ: ವೀಣಾ ಕಾಶಪ್ಪನವರ

12:31 PM Apr 21, 2019 | Team Udayavani |

ಕಲಾದಗಿ: ಕೇಂದ್ರ ಬಿಜೆಪಿ ಸರಕಾರದ ಸಾಧನೆ ಶೂನ್ಯವಾಗಿದೆ, ಯಾವುದೇ ವರ್ಗಕ್ಕೂ ಸರಕಾರದಲ್ಲಿ ಸಹಾಯ ಸಹಕಾರ ಮಾಡಿಲ್ಲ. ಕೇವಲ ಆಶ್ವಾಸನೆ ನೀಡುವ ಕಾರ್ಯ ಮಾಡಿದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ವೀಣಾ ಕಾಶಪ್ಪನವರ ಆರೋಪಿಸಿದರು.

Advertisement

ಗ್ರಾಮದಲ್ಲಿ ರೋಡ್‌ ಶೋ ನಡೆಸಿ ಮಾತನಾಡಿದ ಅವರು, ರಾಮಮಂದಿರವನ್ನು ಮುಂದೆ ಇಟ್ಟುಕೊಂಡು ರಾಜಕೀಯ ಮಾಡುತ್ತಾರೆ. ಅವರು ಎಲ್ಲಿಯವರೆಗೆ ದೇಶವನ್ನು ಆಳಲು ಬಯಸುತ್ತಾರೋ ಅಲ್ಲಿಯವರೆಗೆ ರಾಮ ಮಂದಿರ ಕಟ್ಟುವುದಿಲ್ಲ. ರಾಜಕೀಯ ವಿಷಯಕ್ಕಾಗಿ ರಾಮಮಂದಿರ ಬಳಸಿಕೊಳ್ಳುತ್ತಾರೆ ಎಂದು ಟೀಕಿಸಿದರು. ಜಿಲ್ಲೆಯ ಸಮಗ್ರ ಅಭಿವೃದ್ಧಿ ಕನಸು ಹೊಂದಿದ್ದೇನೆ. ಸಂಸದೆಯಾಗಿ ಆಯ್ಕೆಯಾದಲ್ಲಿ ಸಂಸತ್ತಿನಲ್ಲಿ ರೈತರ ಸಾಲ ಮನ್ನಾದ ಬಗ್ಗೆ ಧ್ವನಿ ಎತ್ತುವುದಾಗಿ ಹೇಳಿದ ಅವರು, ನಿರುದ್ಯೋಗ ಸಮಸ್ಯೆ ನಿರ್ಮೂಲನೆಗೆ ಪಣ ತೊಡುವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next