Advertisement

ಸುಧೀರ್‌ ಗುಪ್ತಾಗೆ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣದ ತನಿಖೆಯ ಹೊಣೆ

12:11 AM Aug 21, 2020 | mahesh |

ಮುಂಬಯಿ: ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರ ಪತ್ನಿ ಸುನಂದಾ ಪುಷ್ಕರ್‌ ಅವರ ಅನುಮಾನಾಸ್ಪದ ಸಾವಿನ ಕುರಿತು ತನಿಖೆ ನಡೆಸುತ್ತಿರುವ ಸಿಬಿಐನ ವಿಧಿವಿಜ್ಞಾನ ತಜ್ಞ ಸುಧೀರ್‌ ಗುಪ್ತಾ ಅವರೇ ಈಗ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ನಡೆಸಲಿದ್ದಾರೆ.

Advertisement

ಏಮ್ಸ್‌ನ ವಿಧಿವಿಜ್ಞಾನ ತಂಡವು ಸದ್ಯದಲ್ಲೇ ಸುಶಾಂತ್‌ರ ಬಾಂದ್ರಾದ ನಿವಾಸಕ್ಕೆ ಭೇಟಿ ನೀಡಲಿದೆ. ಜತೆಗೆ, ಪ್ರಕರಣ ಸಂಬಂಧ ಹೇಳಿಕೆಗಳನ್ನು ಪಡೆಯಲು 5-6 ತಂಡವನ್ನು ಸಿಬಿಐ ರಚಿಸಲಿದೆ ಎಂದು ಟೈಮ್ಸ್‌ ನೌ ವರದಿ ಮಾಡಿದೆ. ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್‌ನ ಒಪ್ಪಿಗೆ ಸಿಕ್ಕ ಬೆನ್ನಲ್ಲೇ ಗುರುವಾರ ಕೇಂದ್ರ ತನಿಖಾ ಸಂಸ್ಥೆಯ ತಂಡ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳಿಗಾಗಿ ಮುಂಬಯಿ ಪೊಲೀಸರನ್ನು ಸಂಪ ರ್ಕಿ ಸಿದೆ. ಅಲ್ಲದೆ, ಸುಶಾಂತ್‌ ಕುಟುಂಬ ಸದಸ್ಯ ರೊಂದಿಗೆ ವಾಟ್ಸ್‌ಆ್ಯಪ್‌ನಲ್ಲಿ ಚಾಟ್‌ ಮಾಡಿದ್ದ ಡಿಸಿಪಿಯನ್ನು ಹಾಗೂ ಸುಶಾಂತ್‌ ಸಹೋದರಿ ಯನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಜತೆಗೆ, ತನಿಖೆಯಲ್ಲಿ ಮುಂಬಯಿ ಪೊಲೀಸರು ಮಾಡಿರುವ ಸಂಭಾವ್ಯ ಲೋಪಗಳ ಕುರಿತೂ ಸಿಬಿಐ ತನಿಖೆ ನಡೆಸಲಿದೆ ಎಂದು ಹೇಳಲಾಗಿದೆ. ಈ ನಡುವೆ, ಪ್ರಕರಣದ ತನಿಖೆಗೆ ಸಂಬಂಧಿಸಿ ಸಿಬಿಐಗೆ ಮಹಾರಾಷ್ಟ್ರ ಸರಕಾರ‌ ಸಂಪೂರ್ಣ ಸಹಕಾರ ನೀಡಲಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಗುರುವಾರ ಹೇಳಿದ್ದಾರೆ.

ಅಂಡರ್‌ವರ್ಲ್ಡ್ ನಂಟು ಸಾಧ್ಯತೆ
ಭೂಗತ ಜಗತ್ತಿನ ಅಪರಾಧಿಗಳಿಗೂ ಸುಶಾಂತ್‌ ಸಾವಿಗೂ ನಂಟು ಇರುವ ಸಾಧ್ಯತೆಯಿದೆ ಎಂದು ಮಾಜಿ ರಾ ಅಧಿಕಾರಿ ಎನ್‌.ಕೆ. ಸೂದ್‌ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಅವರು ಹಣಕಾಸಿನ ತೊಂದರೆಗೆ ಸಿಲುಕಿದ್ದರು ಎಂಬುವುದು ಯಾರನ್ನೋ ರಕ್ಷಿಸಲು ಮಾಡುತ್ತಿರುವ ಯತ್ನ ಎಂದು ನನಗನಿಸುತ್ತಿದೆ. ಈ ಸಾವಿನಲ್ಲಿ ಸುಶಾಂತ್‌ ಮನೆಯಲ್ಲಿ ಕೆಲಸಕ್ಕಿದ್ದವರ ಕೈವಾಡವೂ ಇರಬಹುದು. ಅವರಿಗೆ ಹಣದಾಸೆ ತೋರಿಸಿ ಅಂಡರ್‌ವರ್ಲ್ಡ್ ಕ್ರಿಮಿನಲ್‌ಗ‌ಳು ಈ ಕೃತ್ಯ ಮಾಡಿಸಿರಬಹುದು ಎಂದು ಸೂದ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next