Advertisement

ಸಂಭ್ರಮದ ವಿಜಯದಶಮಿ

01:57 PM Oct 09, 2019 | Suhan S |

ಅಕ್ಕಿಆಲೂರು: ಪಟ್ಟಣ ಸೇರಿದಂತೆ ಬಾಳೆಂಬೀಡ, ಆಡೂರ, ಕಲ್ಲಾಪುರ, ಯತ್ತಿನಹಳ್ಳಿ, ಶಾಡಗುಪ್ಪಿ, ಬೆಳಗಾಲಪೇಟೆ, ಅರಳೇಶ್ವರ ಗ್ರಾಮಗಳಲ್ಲಿ ವಿಜಯದಶಮಿ ದಿನವಾದ ಮಂಗಳವಾರ ವಿವಿಧ ದೇವಸ್ಥಾನ, ಮಠಮಾನ್ಯಗಳಲ್ಲಿನ ದೇವಾನುದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಂಭ್ರಮದಿಂದ ಹಬ್ಬವನ್ನು ಆಚರಿಸಲಾಯಿತು.

Advertisement

ದಸರಾ ನಿಮಿತ್ತ ಮಹಿಳೆಯರು ಬನ್ನಿಗಿಡಗಳಿಗೆ ಸಾಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಿದರು. ಜಿಗಳಿಕೊಪ್ಪದ ಬಳಿಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಪೌರಾಣಿಕ ಯುಗದಲ್ಲಿ ಪಾಂಡವರು ಯುದ್ಧದಲ್ಲಿ ಜಯಗಳಿಸಿ ತಮ್ಮ ಆಯುಧಗಳನ್ನು ಇಲ್ಲಿನ ಬನ್ನಿಗಿಡದ ಬಳಿ ಇಟ್ಟು ಪೂಜೆ ಸಲ್ಲಿಸಿ ಸಂಧ್ಯಾವಂದನೆ ಸಲ್ಲಿಸಿದ್ದರ ಬಗ್ಗೆ ಪ್ರತೀತಿ ಇದೆ. ಅಂದಿನಿಂದ ಇಂದಿನವರೆಗೂ ನಡೆದುಕೊಂಡ ಬಂದ ಆಚರಣೆ ಹಿಂದೂ ಸಂಪ್ರದಾಯದ ವಿ ಧಿವಿಧಾನಗಳ ಪ್ರಕಾರ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next