Advertisement

ಮನೆಯಲ್ಲೇ ರಂಜಾನ್‌ ಆಚರಿಸಿ: ಸಿಪಿಐ

05:07 AM May 22, 2020 | Suhan S |

ಮುಂಡರಗಿ: ತಾಲೂಕಿನ ಡಂಬಳ ಗ್ರಾಮದ ಪೊಲೀಸ್‌ ಹೊರ ಠಾಣೆಯಲ್ಲಿ ರಂಜಾನ್‌ ಪ್ರಯುಕ್ತ ಮುಂಡರಗಿ ಸಿಪಿಐ ಸುಧೀರಕುಮಾರ ಬೆಂಕಿ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು.

Advertisement

ಈ ವೇಳೆ ಮಾತನಾಡಿದ ಅವರು, ಕೋವಿಡ್  ಸೋಂಕು ತಡೆಗಾಗಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಸೇರಿ ಯಾವುದೇ ಧರ್ಮದ ಸಾಮೂಹಿಕ ಪ್ರಾರ್ಥನೆ, ದೇವಸ್ಥಾನ, ದರ್ಗಾಗಳಲ್ಲಿ ಪ್ರವೇಶವನ್ನು ಸರ್ಕಾರ ನಿರ್ಬಂಧಿಸಿದೆ. ಹೀಗಾಗಿ ಈ ಬಾರಿ ರಂಜಾನ್‌ ಹಬ್ಬದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ. ಮನೆಯಲ್ಲೇ ಸಾಮಾಜಿಕ ಅಂತರ ಪಾಲನೆಯೊಂದಿಗೆ ಹಬ್ಬ ಆಚರಿಸಬೇಕು ಎಂದು ಹೇಳಿದರು.

ಗ್ರಾಪಂ ಮಾಜಿ ಅಧ್ಯಕ್ಷ ಗಂಗಣ್ಣ ಸೊರಟೂರ, ಗ್ರಾಪಂ ಸದಸ್ಯ ಕುಮಾರೆಡ್ಡಿ ಪ್ಯಾಟಿ, ಅಂಜುಮನ್‌ ಕಮಿಟಿ ಅಧ್ಯಕ್ಷ ಬಷೀರಅಹ್ಮದ್‌ ತಾಂಬೋಟಿ ಮಾತನಾಡಿದರು. ಮಲ್ಲಣ್ಣ ಯರಾಶಿ, ಮಲ್ಲಪ್ಪ ಮಠದ, ಮರಿಯಪ್ಪ ಸಿದ್ದಣ್ಣನವರ, ಶಫೀಕ ಮೂಲಿಮನಿ, ಬುಡ್ಡೆಸಾಬ ಅತ್ತಾರ ಗ್ರಾಮದ ಹಿರಿಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next