Advertisement

ಚುನಾವಣಾ ಸುಧಾರಣೆ ಬಾಕಿ: ಸರ್ಕಾರಕ್ಕೆ ಸಿಇಸಿ ಪತ್ರ

10:51 PM Jun 08, 2021 | Team Udayavani |

ನವದೆಹಲಿ: ಚುನಾವಣಾ ಕ್ಷೇತ್ರದ ಸುಧಾರಣೆಗಳಿಗೆ ಇರುವ ಕಾನೂನುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್‌ ಚಂದ್ರ ಅವರು ಕಾನೂನು ಸಚಿವ ರವಿಶಂಕರ ಪ್ರಸಾದ್‌ ಅವರಿಗೆ ಪತ್ರ ಬರೆದಿದ್ದಾರೆ. ಬಹಳ ಹಿಂದೆಯೇ ಈ ಬಗ್ಗೆ ಶಿಫಾರಸು ಸಲ್ಲಿಸಲಾಗಿದ್ದರೂ, ಸರ್ಕಾರದಿಂದ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ, ಕಳೆದ ತಿಂಗಳೇ ಪತ್ರ ಬರೆಯಲಾಗಿದೆ ಎಂದು ಸುಶೀಲ್‌ಚಂದ್ರ ತಿಳಿಸಿದ್ದಾರೆ.

Advertisement

ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸುವ ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ ನೀಡುವವರಿಗೆ 2 ವರ್ಷ ಜೈಲು ಶಿಕ್ಷೆ ನೀಡಬೇಕು, ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ 6 ವರ್ಷ ನಿಷೇಧ ಹೇರಬೇಕು ಎಂಬುದು ಸೇರಿ ಹಲವು ಸುಧಾರಣಾ ಕ್ರಮಗಳನ್ನು ಆಯೋಗ ಶಿಫಾರಸು ಮಾಡಿತ್ತು. ಜನತಾ ಪ್ರಾನಿಧ್ಯ ಕಾಯ್ದೆ ಪ್ರಕಾರ “ಪಾವತಿ ಸುದ್ದಿ’ (ಪೈಡ್‌ ನ್ಯೂಸ್‌)ಯನ್ನು ಚುನಾವಣಾ ನಿಯಮ ಉಲ್ಲಂಘನೆ ಎಂದು ಪರಿಗಣಿಸಬೇಕು, ಪ್ರಚಾರ ಅಂತ್ಯಗೊಂಡ ದಿನದಿಂದ ಮತದಾನ ನಡೆಯುವ ದಿನದವರೆಗೆ ರಾಜಕೀಯ ಪಕ್ಷಗಳು ಪತ್ರಿಕೆಗಳಲ್ಲಿ ಜಾಹೀರಾತು ನೀಡುವುದನ್ನು ನಿಷೇಧಿಸಬೇಕು. ಆ ಅವಧಿಯನ್ನು “ನಿಶ್ಶಬ್ದ ಅವಧಿ’ (ಸೈಲೆಂಟ್‌ ಪಿರಿಯೆಡ್‌) ಎಂದು ಪರಿಗಣಿಸುವಂತೆಯೂ ಸಲಹೆ ಮಾಡಿದೆ. ಈ ಉದ್ದೇಶಕ್ಕಾಗಿ ಜನತಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ.

ಇದನ್ನೂ ಓದಿ :ಜಗತ್ತಿನಲ್ಲಿ ಇಂಗಾಲದ ಪ್ರಮಾಣ ಶೇ.50ಕ್ಕಿಂತ ಹೆಚ್ಚಳ! ಮಾಹಿತಿ ಬಹಿರಂಗಪಡಿಸಿದ ಎನ್‌ಒಎಎ

Advertisement

Udayavani is now on Telegram. Click here to join our channel and stay updated with the latest news.

Next