Advertisement

ಬೇಜಾನ್‌ CD ಗಳಿವೆ..! H.C ಬಾಲಕೃಷ್ಣ vs ನಿಖಿಲ್‌ ಕುಮಾರಸ್ವಾಮಿ 

03:45 PM Apr 28, 2018 | Team Udayavani |

ಮಾಗಡಿ: ಜೆಡಿಎಸ್‌ ವಿರುದ್ದ ಬಂಡೆದ್ದು ಕಾಂಗ್ರೆಸ್‌ ಸೇರ್ಪಡೆಯಾದ ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ಮತ್ತು ಜೆಡಿಎಸ್‌ ತಾರಾ ಪ್ರಚಾರಕರಾಗಿರುವ ನಿಖಿಲ್‌ ಕುಮಾರಸ್ವಾಮಿ ನಡುವೆ ಹೊಸ ಸಮರ ಶುರುವಾಗಿದ್ದು ಇಬ್ಬರೂ ಏಟಿಗೆ ಇದಿರೇಟು ನೀಡಿದ್ದಾರೆ. 

Advertisement

ತುಮಕೂರಿನಲ್ಲಿ ಪ್ರಚಾರದ ವೇಳೆ ಬಂಡಾಯವೆದ್ದು ಕಾಂಗ್ರೆಸ್‌ ಸೇರಿದ  ಶಾಸಕರ ವಿರುದ್ದ ವಾಗ್ಧಾಳಿ ನಡೆಸಿದ್ದ ನಿಖಿಲ್‌ ‘ಅವರೆಲ್ಲಾ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ’ ಎಂದಿದ್ದರು. 

ಇದಕ್ಕೆ  ಮಾಗಡಿಯಲ್ಲಿ ಶುಕ್ರವಾರ ನಡೆದ  ಬಹಿರಂಗ ಸಭೆಯಲ್ಲಿ  ತಿರುಗೇಟು ನೀಡಿದ ಬಾಲಕೃಷ್ಣ ‘ನಿಖಿಲ್‌ನ ಬೇಜಾನ್‌ ಸೀಡಿಗಳು ನಮ್ಮಲ್ಲೂ ಇವೆ. ಬಂದವರು ವೋಟ್‌  ಕೇಳಬೇಕು ಅಷ್ಟೇ. ನಮ್ಮ ಬಗ್ಗೆ ಮಾತನಾಡಿದರೆ, ನಮ್ಮತ್ರನೂ ಬಹಳಷ್ಟು ಕ್ಯಾಸೆಟ್‌ಗಳಿವೆ’ ಎಂದು ಬಾಂಬ್‌ ಸಿಡಿಸಿದ್ದಾರೆ. 

ಇದಕ್ಕೆ ತಿರುಗೇಟು ನೀಡಿರುವ ನಿಖಿಲ್‌ ‘ತಾಕತ್‌ ಇದ್ರೆ ಕ್ಯಾಸೆಟ್‌ ಬಿಡುಗಡೆ ಮಾಡಲಿ. ಅವರ ಯೋಗ್ಯತೆ  ಏನು ಎಂದು ಆರುವರೆ ಕೋಟಿ ಕನ್ನಡಿಗರು ನೋಡಿದ್ದಾರೆ. ಹೇಗೆ ಬೆನ್ನಿಗೆ ಚೂರಿ ಚುಚ್ಚಿ  ಹೋಗಿದ್ದಾರೆ ಎಂದು. ಬರೆದುಕೊಳ್ಳಿ ..ಮಾಗಡಿ ಬಾಲಕೃಷ್ಣ  ಅವರು ಈ ಚುನಾವಣೆ ಬಳಿಕ ರಾಜಕೀಯ ನಿವೃತ್ತಿ ಹೊಂದಬೇಕು. ನೋಡೋಣ ಅದು ಹೇಗೆ ರಾಜಕೀಯ ಮಾಡುತ್ತಾರೆ’ ಎಂದು ನಿಖಿಲ್‌ ಪ್ರತಿಸವಾಲು ಹಾಕಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next