Advertisement

ಸಿಡಿ ಪ್ರಕರಣ : ನರೇಶ್-ಶ್ರವಣ್ ನನ್ನ ಹನಿಟ್ರ್ಯಾಪ್‌ ಗೆ ಬಳಸಿಕೊಂಡಿದ್ರು ಎಂದ ಯುವತಿ!

01:55 PM Apr 12, 2021 | Team Udayavani |

ಬೆಂಗಳೂರು :  ಸಿಡಿ ಲೇಡಿ ಪ್ರಕರಣಕ್ಕೆ ದೊಡ್ಡ ಮಟ್ಟದ ತಿರುವು ಸಿಕ್ಕಿದ್ದು, ನನ್ನನ್ನು ಹನಿ ಟ್ರ್ಯಾಪ್‌ ಗೆ ಬಳಿಸಿಕೊಂಡು ಕೃತ್ಯ ಎಸಗಿದ್ದಾರೆ ಎಂದು ನರೇಶ್ ಮತ್ತು ಶ್ರವಣ್ ವಿರುದ್ಧ ಸಿಡಿ ಪ್ರಕರಣದ ಯುವತಿ ಆರೋಪ ಮಾಡಿದ್ದಾರೆ. ನನ್ನನ್ನು ಹನಿಟ್ರ್ಯಾಪ್‌ ಗೆ ಬಳಸಿಕೊಂಡಿದ್ದೇ ನರೇಶ್ ಮತ್ತು ಶ್ರವಣ್ ಎಂದು ನೇರವಾಗಿ ಎಸ್‌ ಐಟಿ ಮುಂದೆ ಯುವತಿ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ

Advertisement

ಎಸ್​ಐಟಿ ತನಿಖಾಧಿಕಾರಿ ಕವಿತಾ ಮುಂದೆ ಸಿಡಿ ಯುವತಿ ಈ ರೀತಿ ಹೇಳಿಕೆ ನೀಡಿರುವುದು ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಸದ್ಯ ಯುವತಿ ಹೇಳಿಕೆಯನ್ನು ರೆಕಾರ್ಡ್ ಮಾಡಲಾಗಿದೆ.

ಯುವತಿಯು SITಗೆ ನೀಡಿರುವ ಆರೋಪದಲ್ಲಿ ಏನಿದೆ :

ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧವಾಗಿ ನನ್ನ ಹೇಳಿಕೆ ಪೂರ್ಣ ಪ್ರಮಾಣದ ಸತ್ಯ ಅಲ್ಲ. ನರೇಶ್ ಹಾಗೂ ಶ್ರವಣ್ ನನ್ನನ್ನು ಹನಿಟ್ರ್ಯಾಪ್‌ ಗೆ ಬಳಸಿಕೊಂಡರು. ಈ ಕಾರಣಕ್ಕಾಗಿ ಅವರು ಹೇಳಿದಂತೆ ನಾನು ಕೇಳಿದೆ. ಅವರು ಒತ್ತಡ ನೀಡಿದ ಕಾರಣ ನಾನು ಆ ರೀತಿ ಹೇಳಿಕೆ ಕೊಟ್ಟಿದ್ದೆ ಎಂದು ತನಿಖಾಧಿಕಾರಿ ಕವಿತಾ ಮುಂದೆ ಸಿಡಿ ಲೇಡಿ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next