Advertisement

ಸಿಡಿ ಕೇಸ್‌: ಎಸ್‌ ಐಟಿನಿಂದ ಪತ್ರಕರ್ತರ ಮುಖಾಮುಖೀ ವಿಚಾರಣೆ

05:49 PM Jun 13, 2021 | Team Udayavani |

ಬೆಂಗಳೂರು: ಮಾಜಿ ಸಚಿವ ರಮೇಶ್‌ ಜಾರಕಿಹೊಳಿಸಿಡಿ ಪ್ರಕರಣ ಸಂಬಂಧ ಪ್ರಕರಣದ ಆರೋಪಿಗಳಾದಪತ್ರಕರ್ತರಾದ ನರೇಶ್‌ ಗೌಡ ಮತ್ತು ಶ್ರವಣ್‌ ಶನಿವಾರ ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗಿದ್ದರು.

Advertisement

ನಿರೀಕ್ಷಣಾ ಜಾಮೀನು ನೀಡಿದ್ದ ಕೋರ್ಟ್‌ ಎಸ್‌ಐಟಿವಿಚಾರಣೆಗೆ ಹಾಜರಾಗಬೇಕು ಎಂಬ ಸೂಚನೆ ಮೇರೆಗೆ ಪ್ರಕರಣದ ಕಿಂಗ್‌ಪಿನ್‌ ನರೇಶ್‌ ಗೌಡ ಹಾಗೂ ಹ್ಯಾಕರ್‌ಶ್ರವಣ್‌ ಶನಿವಾರ ಅಪರಾಹ್ನ 12 ಗಂಟೆಗೆ ಆಡುಗೋಡಿಟೆಕ್ನಿಕಲ್‌ ಸೆಂಟರ್‌ನಲ್ಲಿರುವ ಎಸ್‌ಐಟಿ ತನಿಖಾಧಿಕಾರಿಗಳಮುಂದೆ ಹಾಜರಾಗಿದ್ದರು.ಪ್ರಕರಣದ ತನಿಖಾಧಿಕಾರಿ ಎಸಿಪಿ ಧರ್ಮೇಂದ್ರಕುಮಾರ್‌ ಅವರು ಇಬ್ಬರು ಆರೋಪಿಗಳನ್ನು ಸತತ ಐದುಗಂಟೆಗಳ ಕಾಲ ಸುದೀರ್ಘ‌ ವಿಚಾರಣೆ ನಡೆಸಿ ಪ್ರಕರಣಕುರಿತ ಕೆಲವೆಂದು ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕಮತ್ತೂಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಕಳುಹಿಸಿದ್ದಾರೆ.

ಆರಂಭದಲ್ಲಿ ಇಬ್ಬರನ್ನೂ ಪ್ರತ್ಯೇಕವಾಗಿವಿಚಾರಣೆ ನಡೆಸಿದ ತನಿಖಾಧಿಕಾರಿಗಳು ಬಳಿಕಮುಖಾಮುಖೀ ಕೂರಿಸಿಕೊಂಡು ವಿಚಾರಣೆ ನಡೆಸಲಾಗಿದ್ದು, ರೆಕಾರ್ಡ್‌ ಮಾಡಿಕೊಂಡಿದ್ದಾರೆ. ಜತೆಗೆ ಇಬ್ಬರಮೊಬೈಲ್‌ಗ‌ಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಳಿಕಸಂಜೆ 5 ಗಂಟೆಗೆ ಬಿಟ್ಟು ಕಳುಹಿಸಿದ್ದಾರೆ. ವಕೀಲರ ಸಲಹೆ ಪಡೆದು ಅಗತ್ಯ ಸಿದ್ಧತೆ ನಡೆಸಿಯೇಇಬ್ಬರೂ ವಿಚಾರಣೆಗೆ ಹಾಜರಾಗಿದ್ದಾರೆ ಎನ್ನಲಾಗಿದೆ.ವಿಚಾರಣೆ ವೇಳೆ ಪೊಲೀಸರಿಗೆ ಯಾವ ರೀತಿ ಉತ್ತರನೀಡಬೇಕು ? ಯುವತಿ ವಿಚಾರಣೆ ವೇಳೆ ಯಾವ ಅಂಶಬೆಳಕಿಗೆ ಬಂದಿದೆ? ಎಸ್‌ಐಟಿ ಯಾವೆಲ್ಲಾ ಪ್ರಶ್ನೆಗಳನ್ನುಕೇಳಬಹುದು? ಆ ಪ್ರಶ್ನೆಗಳಿಗೆ ಹೇಗೆ ಉತ್ತರ ನೀಡಬೇಕು?ಎಂಬೆಲ್ಲ ಪ್ರಶ್ನೆಗಳಿಗೆ ಆರೋಪಿಗಳು ಮೊದಲೇ ಸಿದ್ಧರಾಗಿಬಂದಿದ್ದಾರೆಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next