Advertisement

ರವಿಬೆಳಗೆರೆಗೆ ಜಾಮೀನು ನೀಡದಂತೆ ಸಿಸಿಬಿ ಮನವಿ

06:55 AM Dec 12, 2017 | |

ಬೆಂಗಳೂರು: ಪತ್ರಕರ್ತ ರವಿ ಬೆಳಗೆರೆಗೆ ಹೆಚ್ಚಿನ ಕಾನೂನಿನ ಅರಿವಿರುವುದರಿಂದ ಪ್ರಕರಣದ ಮುಂದಿನ ತನಿಖೆಗೆ ಸಂಗ್ರಹಿಸಬೇಕಾದ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಂಭವವಿರುತ್ತದೆ. ಹೀಗಾಗಿ ಆರೋಪಿಗೆ ಜಾಮೀನು ನೀಡದಂತೆ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.

Advertisement

ಸೋಮವಾರ ಆರೋಪಿ ರವಿ ಬೆಳಗೆರೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಸಂದರ್ಭದಲ್ಲಿ ಸಿಸಿಬಿ ಸಲ್ಲಿಸಿರುವ ತಕರಾರು ಅರ್ಜಿಯಲ್ಲಿ ರವಿಬೆಳೆಗೆರೆ ಮತ್ತು ಅಪರಾಧ ಪ್ರಪಂಚದ ಜತೆಗಿನ ನಂಟಿನ ಬಗ್ಗೆ  ಅರ್ಜಿಯಲ್ಲಿ  ಉಲ್ಲೇಖೀಸಿದ್ದಾರೆ.
ಭೂಗತ ಲೋಕದ ಸಂಪರ್ಕವನ್ನು ವೈಯಕ್ತಿಕ ಹಾಗೂ ವ್ಯವಹಾರಿಕ ಬದುಕಿನ ಸಮಸ್ಯೆಗಳಿಗೆ ರವಿ ಬೆಳಗೆರೆ ಉಪಯೋಗಿಸಿಕೊಂಡು ಕೊಲೆಗೆ ಸಂಚು ರೂಪಿಸಿರುವ ಆರೋಪ ಹೊಂದಿದ್ದಾರೆ. ಅಪರಾಧ ಜಗತ್ತಿನ ಬಗ್ಗೆ ಹೆಚ್ಚೆಚ್ಚು ಬರೆಯುತ್ತಾ ಭೂಗತ ಪಾತಕಿಗಳ ಜತೆ ನೇರ ಸಂಪರ್ಕ ಹೊಂದಿದ್ದಾರೆ. ರವಿ ಬೆಳೆಗೆರೆ ಶಸ್ತ್ರಾಸ್ತ್ರ ಪರವಾನಗಿ ಹೊಂದಿದ್ದು, ಈ ಪರವಾನಗಿ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಹೆಚ್ಚಿನ ಗುಂಡುಗಳನ್ನು ಹೊಂದಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಪರವಾನಿಗೆ ಹೊಂದಿದ್ದ ಶಸ್ತ್ರವನ್ನೇ ಈ ಪ್ರಕರಣದಲ್ಲಿ ಬಳಸಿರುವುದು ಕಂಡು ಬಂದಿದೆ. ವೈಜ್ಞಾನಿಕ ತನಿಖೆಯಿಂದ ಸಾûಾ$Âಧಾರ ಸಂಗ್ರಹಿಸಬೇಕಾಗಿದ್ದು, ಅಲ್ಲಿಯವರೆಗೂ ಆರೋಪಿ ನ್ಯಾಯಾಂಗ ಬಂಧನಲ್ಲಿರುವ ಅಗತ್ಯವಿದೆಯೆಂದು ತಿಳಿಸಿದ್ದಾರೆ.

ಆರೋಪಿಯಿಂದ ವಶಕ್ಕೆ ಪಡೆದಿರುವ ಐಫೋನ್‌ ಹಾಗೂ ಟ್ಯಾಬ್‌ಗಳನ್ನು ಸಾûಾ$Âಧಾರ ಸಂಗ್ರಹಣೆಗಾಗಿ ತಜ್ಞರ ಬಳಿ ಕಳುಹಿಸಬೇಕಿರುತ್ತದೆ. ವರದಿ ಬಂದ ನಂತರ ಹೆಚ್ಚಿನ ತನಿಖೆ ಮಾಡಬೇಕಾಗುತ್ತದೆ. ಜತಗೆ ಪ್ರಕರಣದ ಪ್ರಮುಖ ಸಾಕ್ಷಿಗಳು ರವಿ ಬೆಳಗೆರೆ ಅವರ ಪತ್ರಿಕಾ ಕಚೇರಿಯ ಸಿಬ್ಬಂದಿ. ಅವರು ನಿರ್ಭೀತಿಯಿಂದ ಸಾಕ್ಷಿ ಹೇಳಲು ಆರೋಪಿ ನ್ಯಾಯಾಂಗ ಬಂಧನದಲ್ಲಿರುವುದು ಅತ್ಯವಶ್ಯಕ. ರಿವಾಲ್ವಾರ್‌,ಗನ್‌, ಜೀವಂತ ಗುಂಡುಗಳ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಪಡೆಯಬೇಕಿದೆ. ನಿಷೇಧಿತ ವನ್ಯಜೀವಿಗೆ ಸಂಬಂಧಿಸಿದಂತೆ ಜಿಂಕೆ ಚರ್ಮ, ಆಮೆಯ ಚಿಪ್ಪಿನ ಬಗ್ಗೆ  ಮುಂದಿನ ಕ್ರಮಕ್ಕೆ ಅರಣ್ಯ ಇಲಾಖೆ ವಶಕ್ಕೆ ನೀಡಲು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ. ತಮಗಿರುವ ಅಪರಾಧ ಜ್ಞಾನದಿಂದ ಸುಪಾರಿ ಪ್ರಕರಣದಲ್ಲಿ ಯಾರಿಗೂ ತಿಳಿಯದಂತೆ ಸಾಕ್ಷ್ಯಾಧಾರಗಳು ಸಿಗದಂತೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಸಿಸಿಬಿ ಅಧಿಕಾರಿಗಳು ಮೂರು ಪುಟಗಳ ತಕರಾರು ಅರ್ಜಿಯನ್ನು ಸಲ್ಲಿಸಿದ್ದಾರೆ.

ಪ್ರಯೋಜನವಾಗದ ಕಸ್ಟಡಿ
ನಾಲ್ಕು ದಿನಗಳ ಕಾಲ ವಶಕ್ಕೆ ಪಡೆದ ರವಿ ಬೆಳಗೆರೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ಪ್ರಕರಣದಲ್ಲಿ ಸಿಕ್ಕಿರುವ ತಾಂತ್ರಿಕ ಸಾಕ್ಷ್ಯಾಧಾರಗಳು ಇದ್ದರೂ ಆರೋಪಿಯಿಂದ ಪೂರ ಉತ್ತರ ದೊರೆಯುತ್ತಿತಿಲ್ಲ. ವಿಚಾರಣೆಗಿಂತ ನಾಲ್ಕು ದಿನಗಳ ಕಾಲ ರವಿಬೆಳಗೆರೆಯ ಯೋಗಕ್ಷೇಮ ನೋಡಿಕೊಳ್ಳುವುದರಲ್ಲೇ ಸಿಬ್ಬಂದಿ ಸುಸ್ತಾಗಿದ್ದಾರೆ. ಆರೋಗ್ಯದ ಸಮಸ್ಯೆ ಇರುವುದರಿಂದ ಪೊಲೀಸ್‌ ಕಸ್ಟಡಿಯಲ್ಲಿ ಹೆಚ್ಚಾ ಕಡಿಮೆ ಆದರೆ ತಾವೇ ತಲೆಕೊಡಬೇಕಾಗುತ್ತದೆ ಎನ್ನುವ ಆತಂಕದಿಂದ ರಾತ್ರಿ ಕಾವಲಿಗಿದ್ದ ಪೊಲೀಸರೂ ಒಂದು ಕ್ಷಣವೂ ಕಣ್ಣು ಮುಚ್ಚದಂತೆ ಕಾದಿದ್ದಾರೆ.

ದಿನಕ್ಕೆ 3 ಸಾವಿರ ರೂ.ಸಿಗರೇಟು..!
ವಿಚಾರಣೆ ಸಂದರ್ಭದಲ್ಲಿ ರವಿ ಬೆಳಗೆರೆ ಒತ್ತಡಕ್ಕೊಳಗಾಗುತ್ತಿದ್ದರು. ಈ ವೇಳೆ ವಿಪರೀತ ಸಿಗರೇಟ್‌ ಸೇದಬೇಕು ಎಂದು ಒತ್ತಾಯಿಸಿದ್ದರು. ಹೀಗೆ ಕಳೆದ ಮೂರು ದಿನಗಳಿಂದ ಅವರಿಗೆ ಸಿಗರೇಟ್‌ ಪೂರೈಕೆ ಮಾಡುವುದರಲ್ಲೇ ಸಾಕು ಸಾಕಾಗಿದೆ. ಗಂಟೆಗೆ ಒಂದು ಪ್ಯಾಕ್‌ ಎಂಬಂತೆ ನಿತ್ಯ ಕನಿಷ್ಠ 10 ಪ್ಯಾಕ್‌ ಸಿಗರೇಟ್‌ ಬೇಕಾಗಿತ್ತು. ಒಂದು ವೇಳೆ ಸಿಗರೇಟ್‌ ಕೊಡದಿದ್ದರೆ, ಎಲ್ಲಿಯೂ ಬರುವುದಿಲ್ಲ. ಏನನ್ನು ಹೇಳುವುದಿಲ್ಲ.ಹೀಗಾಗಿ ಅನಿವಾರ್ಯವಾಗಿ ದಿನಕ್ಕೆ ನಮ್ಮ ಜೇಬಿನಿಂದ 3 ಸಾವಿರ ರೂ. ಖರ್ಚು ಮಾಡಿ ಸಿಗರೇಟ್‌ ತಂದು ಕೊಡುತ್ತಿದ್ದೆವು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next