Advertisement

ಯಡಿಯೂರಪ್ಪ ರಾಜಹುಲಿ ಎಂಬುದು ಸಾಬೀತು: ಸಿ.ಸಿ. ಪಾಟೀಲ್

02:05 PM Nov 12, 2020 | sudhir |

ಗದಗ: ಉಪ ಚುನಾವಣೆ ಮುಗಿದ ನಂತರ ರಾಜಹುಲಿ ಬದಲಾವಣೆ ಮಾಡುತ್ತಾರೆ ಎಂದು ಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರು ಬೊಬ್ಬೆ ಹೊಡೆದಿದ್ದರು. ಆದರೆ, ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸುವ ಮೂಲಕ
ಯಡಿಯೂರಪ್ಪನೇ ರಾಜಹುಲಿ ಎಂಬುದು ಸಾಬೀತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್ ಹೇಳಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿ, ರಾಜ್ಯ ವಿಧಾನಸಭೆಯ ಶಿರಾ ಮತ್ತು ಆರ್‌ ಆರ್‌ ನಗರ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಡಿಕೆ ಸುರೇಶ್‌, ಡಿಕೆ ಶಿವಕುಮಾರ್‌, ಸಿದ್ದರಾಮಯ್ಯ ಅಬ್ಬರದ ಪ್ರಚಾರ ಮಾಡಿದ್ದರು. ಎಲ್ಲ ಕಡೆ ಜಾತಿಯ ಕಾರ್ಡ್‌ ಆಟವಾಡಿದರು. ಆದರೆ ಅದ್ಯಾವುದೂ ಫಲಿಸಲಿಲ್ಲ. ರಾಜ್ಯದ ಜನತೆ ಸರಕಾರ ಕಾರ್ಯವೈಖರಿಯನ್ನು ಮೆಚ್ಚಿದ್ದಾರೆ.

ಕೋವಿಡ್‌ ನಿಯಂತ್ರಣ, ನೆರೆ, ಪ್ರವಾಹದ ಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಿದ ಬಿಎಸ್‌ವೈ ಸರಕಾರಕ್ಕೆ ಮತದಾರ ಜೈ ಎಂದಿದ್ದಾನೆ. ಮುಂದಿನ ಎರಡೂವರೆ ವರ್ಷ ಬಿಎಸ್‌ವೈ ನೇತೃತ್ವದಲ್ಲಿ ಯಶಸ್ವಿಯಾಗಿ ಸರಕಾರ ಕಾರ್ಯ ನಿರ್ವಹಿಸಲಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಶಿರಾ ಕ್ಷೇತ್ರದಲ್ಲಿ ಕಮಲ ಅರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ಚುನಾವಣೆಯಲ್ಲೂ ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ದೇಶೀಯತೆ ಬಿಂಬಿಸುವ ದಿರಿಸಿನಲ್ಲಿ ಟೀಂ ಇಂಡಿಯಾ ಎದುರು ಆಡಲಿದ್ದಾರೆ ಆಸೀಸ್‌ ಕ್ರಿಕೆಟಿಗರು

Advertisement

Udayavani is now on Telegram. Click here to join our channel and stay updated with the latest news.

Next