Advertisement

ಚಿದಂಬರಂ ಕಸ್ಟಡಿ ಒಂದು ದಿನ ವಿಸ್ತರಣೆ

09:31 AM Sep 03, 2019 | Hari Prasad |

ನವದೆಹಲಿ: ಐ.ಎನ್.ಎಕ್ಸ್. ಮೀಡಿಯಾ ಪ್ರಕರಣದಲ್ಲಿ ವಿಚಾರಣೆಗಾಗಿ ಸಿಬಿಐ ವಶದಲ್ಲಿರುವ ಮಾಜೀ ಹಣಕಾಸು ಸಚಿವ ಮತ್ತು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರ ಕಸ್ಟಡಿಯನ್ನು ಇನ್ನೂ ಒಂದು ದಿನಕ್ಕೆ ವಿಸ್ತರಿಸಲಾಗಿದೆ.

Advertisement

ಚಿದಂಬರಂ ಅವರ ವಿಚಾರಣೆಗೆ ಇನ್ನೂ ಒಂದು ದಿನದ ಕಾಲಾವಕಾಶ ಬೇಕು ಎಂಬ ಸಿಬಿಐ ಮನವಿಯನ್ನು ಪುರಸ್ಕರಿಸಿದ ದೆಹಲಿ ನ್ಯಾಯಾಲಯವು ಸೋಮವಾರದಂದು ಈ ಆದೇಶವನ್ನು ನೀಡಿದೆ.

ಸಿಬಿಐ ಮತ್ತು ಚಿದಂಬರಂ ಅವರ ವಕೀಲರ ವಾದಗಳನ್ನು ಆಲಿಸಿದ ಬಳಿಕ ವಿಶೇಷ ನ್ಯಾಯಾಧೀಶರಾಗಿರುವ ಅಜಯ್ ಕುಮಾರ್ ಕುಹಾರ್ ಅವರು ಈ ಆದೇಶವನ್ನು ನೀಡಿದ್ದಾರೆ. ಆಗಸ್ಟ್ 30ರಂದು ಚಿದಂಬರಂ ಅವರನ್ನು ವಿಚಾರಣೆಗಾಗಿ ಸಿಬಿಐ ವಶಕ್ಕೆ ಒಪ್ಪಿಸಲಾಗಿತ್ತು. ಅವರ ಮೂರು ದಿನಗಳ ಸಿಬಿಐ ಕಷ್ಟಡಿ ಇಂದು ಅಂತ್ಯಗೊಂಡ ಕಾರಣ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next