Advertisement

ಸಿಬಿಐ: ಮೋದಿ ಮಧ್ಯಸ್ಥಿಕೆ

06:00 AM Oct 23, 2018 | Team Udayavani |

ಹೊಸದಿಲ್ಲಿ: ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐನಲ್ಲಿ ಆಂತರಿಕ ಬಿಕ್ಕಟ್ಟು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಮಾಂಸ ರಫ್ತುದಾರ ಮೊಯಿನ್‌ ಖುರೇಶಿ ಪ್ರಕರಣದ ತನಿಖೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ವಿರುದ್ಧ ದೂರು ದಾಖಲಿಸಲಾಗಿದ್ದರೆ, ಸೋಮವಾರ ಡೆಪ್ಯುಟಿ ಎಸ್‌ಪಿ ದೇವೇಂದ್ರ ಕುಮಾರ್‌ರನ್ನು ಬಂಧಿಸಲಾಗಿದೆ. ಈ ಮಧ್ಯೆ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ಹಾಗೂ ನಿರ್ದೇಶಕ ಅಲೋಕ್‌ ಕುಮಾರ್‌ರನ್ನು ಪ್ರಧಾನಿ ಕಚೇರಿಗೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಸಮನ್ಸ್‌ ನೀಡಿದ್ದಾರೆ. ಮೂಲಗಳ ಪ್ರಕಾರ ರಾಕೇಶ್‌ ವಿರುದ್ಧ ದೂರು ದಾಖಲಿಸುವುದಕ್ಕೂ ಮುನ್ನ ಸರಕಾರದ ಅನುಮತಿ ಪಡೆದಿಲ್ಲ ಎಂದು ಪ್ರಧಾನಿ ಕಾರ್ಯಾಲಯ ಆಕ್ಷೇಪ ವ್ಯಕ್ತಪಡಿ ಸಿದೆ ಎನ್ನಲಾಗಿದೆ.

Advertisement

ಖುರೇಶಿ ಪ್ರಕರಣದಲ್ಲಿ ಆರೋಪಿ ಸ್ಥಾನದಿಂದ ಕೈಬಿಡುವಂತೆ ಸತೀಶ್‌ ಸನಾ ಎಂಬ ವ್ಯಕ್ತಿ ಟಿಡಿಪಿ ಸಂಸದರ ಮೂಲಕ ಅಲೋಕ್‌ ಕುಮಾರ್‌ಗೆ 2 ಕೋಟಿ ರೂ. ಲಂಚ ನೀಡಿದ್ದೇನೆ ಎಂದು ವಿಚಾರಣೆ ವೇಳೆ ಹೇಳಿದ್ದಾಗಿ ರಾಕೇಶ್‌ ಅಸ್ತಾನಾ ತಂಡ ವರದಿ ಮಾಡಿತ್ತು. ಆದರೆ ವಿಚಾರಣೆ ನಡೆಸಲಾಗಿದೆ ಎಂದು ರಾಕೇಶ್‌ ವರದಿ ಮಾಡಿದ ದಿನ ಸನಾ ಹೈದರಾಬಾದ್‌ನಲ್ಲಿ ಇದ್ದ ಎಂದು ಅಲೋಕ್‌ ಕುಮಾರ್‌ ತಂಡ ಆರೋಪಿಸಿದೆ. ರಾಕೇಶ್‌ ತಂಡದಲ್ಲಿ ದೇವೇಂದ್ರ ಕುಮಾರ್‌ ಪ್ರಮುಖ ತನಿಖಾ ಅಧಿಕಾರಿ ಯಾಗಿದ್ದು, ಸನಾ ಹೇಳಿಕೆ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಅಲೋಕ್‌ ಕುಮಾರ್‌ ತಂಡ ಆರೋಪಿಸಿ ಬಂಧಿಸಿದೆ. ರಾಕೇಶ್‌ ಗುಜರಾತ್‌ ಕೇಡರ್‌ ಅಧಿಕಾರಿಯಾಗಿದ್ದು, ಮೋದಿ ಅಧಿಕಾರಕ್ಕೆ ಬಂದ ನಂತರ ವಿಶೇಷ ನಿರ್ದೇಶಕರಾಗಿ ನೇಮಕವಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next