Advertisement

ಬಿಹಾರದಲ್ಲಿ ಇನ್ನು ಮುಂದೆ ಸಿಬಿಐ ತನಿಖೆಗೆ ಅವಕಾಶ ಇಲ್ಲ

10:09 PM Aug 29, 2022 | Team Udayavani |

ಪಾಟ್ನಾ:ಬಿಹಾರದಲ್ಲಿ ಇನ್ನು ಮುಂದೆ ಕೇಂದ್ರ ತನಿಖಾ ಸಂಸ್ಥೆ ಸಿಬಿಐಗೆ ತನಿಖೆ ನಡೆಸಲು ಅನುಮತಿ ಇಲ್ಲ. ಸದ್ಯ ಇರುವ ಪರವಾನಗಿಯನ್ನು ಸಿಎಂ ನಿತೀಶ್‌ ನೇತೃತ್ವದ ಮಹಾ ಮೈತ್ರಿಕೂಟ ಸರ್ಕಾರ ಹಿಂಪಡೆದಿದೆ.

Advertisement

ಕೇಂದ್ರ ಸರ್ಕಾರ ಸಿಬಿಐ ಅನ್ನು ರಾಜಕೀಯ ಕಾರಣಗಳಿಗಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಸರ್ಕಾರ ಪ್ರತಿಪಾದಿಸಿದೆ. ಉದ್ಯೋಗಕ್ಕಾಗಿ ಜಮೀನು ಪ್ರಕರಣ ಸಂಬಂಧ ಆರ್‌ಜೆಡಿ ನಾಯಕರ ಮನೆ ಮೇಲೆ ಸಿಬಿಐ ದಾಳಿ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಸಿಬಿಐ, ಬಿಹಾರ ಸರ್ಕಾರದ ನಿರ್ಧಾರವು ಉದ್ಯೋಗಕ್ಕಾಗಿ ಜಮೀನು ಪ್ರಕರಣಕ್ಕೆ ಅನ್ವಯಿಸುವುದಿಲ್ಲ. ಏಕೆಂದರೆ, ಅದು ದೆಹಲಿಯಲ್ಲಿ ದಾಖಲಾದ ದೂರು ಎಂದಿದೆ.

ಈಗಾಗಲೇ ಪಶ್ಚಿಮ ಬಂಗಾಳ, ಛತ್ತೀಸ್‌ಗಡ, ರಾಜಸ್ಥಾನ, ಪಂಜಾಬ್‌ ಸೇರಿ 9 ರಾಜ್ಯಗಳಲ್ಲಿ ಸಿಬಿಐ ತನಿಖೆಗೆ ನೀಡಲಾಗಿದ್ದ ಪರವಾನಗಿ ವಾಪಸ್‌ ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next