Advertisement

ತ.ನಾಡು ರೈತರಿಂದ ವಿಶಿಷ್ಟ ಪ್ರತಿಭಟನೆ

10:05 AM Apr 07, 2018 | Team Udayavani |

ಚೆನ್ನೈ: ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಒತ್ತಾಯಿಸಿ ತಮಿಳುನಾಡಿನಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಇದೀಗ ಇಲ್ಲಿನ ರೈತರ ಪ್ರವೇಶವಾಗಿದೆ. ಕಳೆದ ವರ್ಷ ದಿಲ್ಲಿಯಲ್ಲಿ ವಿನೂತನ ಪ್ರತಿಭಟನೆಗಳನ್ನು ನಡೆಸಿ ದೇಶದ ಗಮನ ಸೆಳೆದಿದ್ದ ತಮಿಳುನಾಡಿನ ರೈತರು ಶುಕ್ರವಾರ ತಮ್ಮನ್ನು ತಾವು ಕುತ್ತಿಗೆಯವರೆಗೂ ಸಮಾಧಿ ಮಾಡಿ ಕೊಳ್ಳುವ ಮೂಲಕ ಕಾವೇರಿ ಪ್ರತಿಭಟನೆಗೆ ಧುಮುಕಿದ್ದಾರೆ.

Advertisement

ಗುಲಾಬಿ ಹೂವುಗಳಿಂದ ಪೋಣಿಸಿದ ಹಾರಗಳನ್ನು ಹಾಕಿಕೊಂಡು, ಶ್ರೀರಂಗಂನಲ್ಲಿನ ಕಾವೇರಿ ನದಿ ತೀರಕ್ಕೆ ಆಗಮಿಸಿದ ರೈತರು ಸುಡುವ ಮರಳಿನಲ್ಲಿ ಕುತ್ತಿಗೆ ತನಕ ತಮ್ಮನ್ನು ತಾವು ಹೂತು, 2 ಗಂಟೆ ಕಾಲ ಪ್ರತಿಭಟಿಸಿದ್ದಾರೆ. ಇದೇ ವೇಳೆ, ರಾಜ್ಯದ ಇತರೆಡೆ ವಿವಿಧ ರಾಜಕೀಯ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳಿಂದಲೂ ಪ್ರತಿಭಟನೆ ನಡೆದಿದೆ.

ಬ್ಯಾನ್‌ ಐಪಿಎಲ್‌ ಅಭಿಯಾನ: ತಮಿಳು ನಾಡಿನಾದ್ಯಂತ ಕಾವೇರಿ ಪ್ರತಿ ಭಟನೆಯ ಕಾವು ಐಪಿಎಲ್‌ ಪಂದ್ಯಕ್ಕೂ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಚೆನ್ನೈಯಲ್ಲಿ CSK ಪೋಸ್ಟರ್‌ಗಳಿಗೆ ಮಸಿ ಬಳಿಯಲಾಗಿದೆ. ಐಪಿಎಲ್‌ ಪಂದ್ಯಗಳನ್ನೇ ಬಹಿಷ್ಕರಿಸುವಂತೆ ಪ್ರತಿಭಟನಾನಿರತ ರೈತರು ಆಗ್ರಹಿಸಿದ್ದಾರೆ. ಇದೇ ವೇಳೆ, ಚೆನ್ನೈನಲ್ಲಿ ಮೊದಲ ಪಂದ್ಯ ನಡೆಯಲಿರುವ ಚಿದಂಬರಂ ಸ್ಟೇಡಿಯಂ ಹೊರಗೆ ಎ.10ರಂದು ಪ್ರತಿಭಟನೆ ನಡೆಸಲೂ ಕೆಲವು ಸಂಘಟನೆಗಳು ನಿರ್ಧರಿಸಿವೆ. ರಾಜ್ಯದ ಜನತೆ ಕಾವೇರಿಗಾಗಿ ಐಪಿಎಲ್‌ ನಿಷೇಧಿಸಿ ಎಂದು ಶಾಸಕ ಟಿ.ಟಿ.ವಿ. ದಿನಕರನ್‌ ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next