Advertisement

Cauvery issue: ರಾಜ್ಯದ ಜನರಿಗೆ ನಾಮ ಹಾಕಿದ್ದೇ ಕಾಂಗ್ರೆಸ್ ಸಾಧನೆ: ಸಂಸದ ಪ್ರತಾಪ್‌ ಸಿಂಹ

07:50 PM Sep 25, 2023 | Team Udayavani |

ಹುಣಸೂರು: ಕಾವೇರಿ ವಿಚಾರದಲ್ಲಿ ರೈತರಿಗೆ ಪಂಗನಾಮ ಹಾಕಿರುವುದೇ ಕಾಂಗ್ರೆಸ್ ಸರಕಾರದ ದೊಡ್ಡ ಸಾಧನೆ ಎಂದು ಸಂಸದ ಪ್ರತಾಪ್‌ಸಿಂಹ ಟೀಕಿಸಿದರು.

Advertisement

ಕಟ್ಟೆಮಳಲವಾಡಿಯ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಹರಾಜಿಗೆ ಚಾಲನೆ ನೀಡಿದ ನಂತರ ಕಾವೇರಿ ಸಮಸ್ಯೆ ಬಗೆಗಿನ ಪ್ರಶ್ನೆಗೆ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ವಿರುದ್ದ ಮಾತಾಡ್ತಿಲ್ಲಾ,ಈ ವಿಷಯದಲ್ಲಿ ಪ್ರಧಾನಮಂತ್ರಿಗಳು ಮಧ್ಯ ಪ್ರವೇಶಿಸುವುದಿಲ್ಲ, ಹಿಂದೆಯೇ 198ಟಿಎಂಸಿ ನೀರಿನ ಬದಲು 175 ಟಿಎಂಸಿ ನೀರು ಪೂರೈಕೆ ನಿಗದಿಪಡಿಸಿದ್ದರು.

ಕಾವೇರಿ ತೀರದ ಪ್ರದೇಶದಲ್ಲಿ ಮಳೆಗಾಲ ಕಡಿಮೆಯಾಗಿರುವ ಬಗ್ಗೆ ಮಾಹಿತಿ ಇದ್ದರೂ ಮುನ್ನೆಚ್ಚರಿಕೆ ಕ್ರಮವಹಿಸದ ಸರಕಾರ ಭಾಗ್ಯಲಕ್ಷ್ಮೀ, ಗೃಹಲಕ್ಷ್ಮೀ, ಎಂದು ಬೋರ್ಡ್ ಹಾಕುವುದರಲ್ಲೇ ಕಾಲ ಕಳೆಯಿತೆಂದು ಟೀಕಿಸಿ, 40 ವರ್ಷರಾಜಕಾರಣ ಮಾಡಿರುವ ಡಿಕೆ.ಶಿವಕುಮಾರ್,ಸಿದ್ದರಾಮಯ್ಯನವರು ಪ್ರತಿಹಂತದಲ್ಲೂ ಕರ್ನಾಟಕ್ಕೆ ಸೆಟ್‌ಬ್ಯಾಕ್ ಆಗುವಂತೆ ನೋಡಿಕೊಂಡಿದ್ದಾರೆ. ಇದೇನಾ 40 ವರ್ಷದ ರಾಜಕಾರಣ ಎಂದು ಕುಟುಕಿದ ಸಂಸದರು, ಕಾವೇರಿ ಪ್ರಾಧಿಕಾರವು ಇನ್ನಾದರೂ ಸತ್ಯಶೋಧನಾ ಸಮಿತಿ ಕಳುಹಿಸಿ ವಾಸ್ಥವ ಸ್ಥಿತಿಯನ್ನು ಅರಿತು ಕರ್ನಾಟಕದ ನೆರವಿಗೆ ಬರುವ ಅಗತ್ಯವಿದೆ. ಬಿಜೆಪಿ ಹಾಗೂ ಜೆಡಿಎಸ್‌ನವರು ರೈತರ ಹೋರಾಟವನ್ನು ಬೆಂಬಲಿಸಲಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next