Advertisement

ದನಗಳ ಕಳವು: ಇಬ್ಬರ ಬಂಧನ

08:46 PM Apr 05, 2023 | Team Udayavani |

ಮಂಗಳೂರು: ಕಾವೂರು ಗಾಂಧಿನಗರದಲ್ಲಿ ಕಳೆದ ಫೆ.11ರಂದು ಕಾರಿನಲ್ಲಿ ಬಂದು ದನಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

Advertisement

ಬಂಟ್ವಾಳ ತಾಲೂಕು ಅಮ್ಮೇಮಾರ್‌ ಗ್ರಾಮದ ಸಾಹುಲ್‌ ಹಮೀದ್‌ ಆಲಿಯಾಸ್‌ ಟಿಂಬರ್‌ ಹಮೀದ್‌(33) ಮತ್ತು ಮೊಹಮ್ಮದ್‌ ಸಾದಿಕ್‌ ಆಲಿಯಾಸ್‌ ನೀಲಿ ಸಾದಿಕ್‌ (26) ಬಂಧಿತರು.

ಕಾರಿನಲ್ಲಿ ಬಂದಿದ್ದ ಆರೋಪಿಗಳು ಮೇಯುತ್ತಿದ್ದ ದನಗಳನ್ನು ಕಳ್ಳತನ ನಡೆಸಿ ವಧೆ ಮಾಡಿ ಮಾಂಸವನ್ನು ಸಾಗಿಸಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಕಾರ್ಯಾಚರಣೆಯಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಪಿ.ಐ.ಗುರುರಾಜ್‌, ಪಿಎಸ್‌ಐ ರಘು ನಾಯಕ್‌, ರೇವಣ್ಣ ಸಿದ್ಧಪ್ಪ, ಹೆಡ್‌ ಕಾನ್‌ಸ್ಟೆಬಲ್‌ ಸಂತೋಷ್‌ ಸಿ.ಜಿ, ಕಾನ್‌ಸ್ಟೆಬಲ್‌ಗ‌ಳಾದ ಶ್ರೀಧರ್‌, ರಾಘವೇಂದ್ರ ಪಾಲ್ಗೊಂಡಿದ್ದರು.

ಹಲವೆಡೆ ಕೃತ್ಯ
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಈ ಹಿಂದೆ ಉಳ್ಳಾಲ, ಪುತ್ತೂರು ಮತ್ತು ಬೆಳ್ತಂಗಡಿ ಪೊಲೀಸ್‌ ಠಾಣೆಗಳಲ್ಲಿ ಗೋ ಕಳ್ಳತನ ಪ್ರಕರಣ ದಾಖಲಾಗಿದ್ದವು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next