Advertisement

ಹುಲಿ ದಾಳಿಗೆ ರಾಸು ಬಲಿ: ಕಾರ್ಯಾಚರಣೆ

10:21 PM Sep 06, 2019 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನದಂಚಿನಲ್ಲಿ ಮತ್ತೆ ಹುಲಿ ದಾಳಿ ಮುಂದುವರಿದಿದ್ದು, ಮತ್ತೊಂದು ಜಾನುವಾರು ಬಲಿಯಾಗಿದೆ. ತಾಲೂಕಿನ ಹನಗೋಡು ಹೋಬಳಿಯ ಕೆ.ಜಿ.ಹೆಬ್ಬನಕುಪ್ಪೆಯ ತರಗನ್‌ ಎಸ್ಟೇಟ್‌ನಲ್ಲಿ ಎಸ್ಟೇಟ್‌ ಮಾಲೀಕರಿಗೆ ಸೇರಿದ ಜಾನುವಾರು ಬಲಿಯಾಗಿದ್ದು, ಮೇಯಲು ಬಿಟ್ಟಿದ್ದ ವೇಳೆ ಹುಲಿ ದಾಳಿ ನಡೆಸಿ ಕೊಂದು-ತಿಂದು ಹಾಕಿದೆ.

Advertisement

ಘಟನೆ ವಿವರ: ಜಾನುವಾರುಗಳನ್ನು ಎಸ್ಟೇಟ್‌ನಲ್ಲಿ ಮೇಯಲು ಬಿಟ್ಟಿದ್ದ ವೇಳೆ ಒಂದು ಜಾನುವಾರು ಹೊರತು ಪಡಿಸಿ, ಉಳಿದೆಲ್ಲ ಜಾನುವಾರುಗಳು ಗುರುವಾರ ಸಂಜೆ ವಾಪಸ್ಸಾಗಿದ್ದವು. ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ, ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಆರ್‌ಎಫ್‌ಒ ಹನುಮಂತರಾಯ ಹಾಗೂ ಸಿಬ್ಬಂದಿ ಎಸ್ಟೇಟ್‌ನಲ್ಲಿ ಸಾಕಾನೆಗಳ ಸಹಾಯದಿಂದ ಕೂಂಬಿಂಗ್‌ ನಡೆಸಿದ ವೇಳೆ ಹುಲಿ ದಾಳಿ ನಡೆಸಿದ್ದು, ಜಾನುವಾರ ಸಾವಿಗೀಡಾಗಿರುವುದು ಪತ್ತೆಯಾಗಿದೆ.

ಹುಲಿ ಪತ್ತೆಗೆ ಸಿಸಿ ಕ್ಯಾಮೆರಾ: ಇದೀಗ ಸ್ಥಳದಲ್ಲಿ ನಾಲ್ಕು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ, ಹುಲಿಯೋ, ಹುಲಿ ಮರಿಯೋ ಎಂಬುದನ್ನು ತಿಳಿದು ಸೆರೆ ಹಿಡಿಯಲು ಬೋನ್‌ ಇಡಲಾಗುವುದು ಎಂದು ಅರಣ್ಯಾಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

ವರ್ಷದಿಂದ ಹುಲಿ ಉಪಟಳ: ಕಳೆದ ಒಂದು ವರ್ಷದಿಂದೀಚೆಗೆ ಆಡು-ಕುರಿ ಸೇರಿದಂತೆ 15ಕ್ಕೂ ಹೆಚ್ಚು ಜಾನುವಾರುಗಳನ್ನು ಬಲಿ ತೆಗೆದುಕೊಂಡಿದೆ. ಈ ಭಾಗದಲ್ಲಿ ಜನರು ಓಡಾಡಲು ಹೆದರುತ್ತಿದ್ದು, ಹುಲಿ ಸೆರೆ ಹಿಡಿದು ಆತಂಕವನ್ನು ದೂರಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next